ಬೆಂಗಳೂರು: ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಸೋಲಿನ ಹಿಂದಿನ ಕಾರಣವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಚ್ಚಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸ್ವಕ್ಚೇತ್ರದಲ್ಲಿ ಹಿನ್ನಡೆ ವಿಚಾರವಾಗಿ ನಾವು ಕುಳಿತಿಕೊಂಡು ವಿಚಾರ ಮಾಡಬೇಕಿದೆ ಎಂದಿದ್ದಾರೆ. ಬೆಳಗಾವಿಯಲ್ಲಿ ನಮ್ಮದು ಟ್ರೈ ಆ್ಯಂಗಲ್ ಫೈಟ್. ಆದರೆ, ಈ ಬಾರಿ ಎಂಇಎಸ್ ಬಿಜೆಪಿ ಒಂದಾಗಿದಕ್ಕೆ ಈ ಫಲಿತಾಂಶ ಬಂದಿದೆ.
ಕ್ಷೇತ್ರದಲ್ಲಿ 5 ಲಕ್ಷದ 90 ಸಾವಿರ ಲೀಡ್ ತೆಗೆದುಕೊಂಡಿದ್ದೇವೆ. ಆದರೆ ಸೋಲಿಗೆ ಅನೇಕ ಕಾರಣಗಳಿವೆ, ಈ ಕುರಿತಾಗಿ ಕುಳಿತುಕೊಂಡು ಯೋಚಿಸಬೇಕಿದೆ ಎಂದರು. ಸೋಲಿಗೆ ಆಂತರಿಕ ರಾಜಕೀಯ ಕಾರಣವೇ ಎಂಬ ಪ್ರಶ್ನೆಗೆ, ನೋಡೋಣ ಮುಂದಿನ ದಿನಗಳಲ್ಲಿ ಏನಾಯ್ತು ಎಲ್ಲಿ ತಪ್ಪಾಯ್ತು ಎಂದಷ್ಟೇ ಅವರು ಉತ್ತರಿಸಿದರು. ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು,
Ginger Side Effects: ಅತಿಯಾದ ಶುಂಠಿ ಸೇವನೆಯಿಂದ ಏನೆಲ್ಲಾ ಅಡ್ಡ ಪರಿಣಾಮಗಳಾಗುತ್ತೆ ಗೊತ್ತಾ..?
ಬೆಂಗಳೂರು ಬಂದಾಗ ಡಿಕೆಶಿಯನ್ನು ಭೇಟಿ ಆಗುವುದು ಸಹಜ. ತುಂಬಾ ದಿನ ಆಗಿತ್ತು ಅದಕ್ಕೆ ಭೇಟಿ ಮಾಡಿದೆ ಎಂದರು. ಲೋಕಸಭಾ ಚುನಾವಣೆ ಫಲಿತಾಂಶದ ಪರಮರ್ಶೆಯ ವರದಿ ವಿಚಾರವಾಗಿ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಅದರ ಕೇಳಿದ್ರೆ ಖಂಡಿತಾ ಹೇಳುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಕ್ಷೇತ್ರದಲ್ಲಿ ಸ್ಥಳೀಯ ನಾಯಕರ ಬೆಂಬಲದ ಕೊರತೆ ವಿಚಾರವಾಗಿ, ಸೋತ ಮೇಲೆ ಹೇಳೋದು ಸರಿಯಲ್ಲ. ನಾವು ಮಾಡಿದ ಪ್ರಚಾರ ಬೆಂಬಲ ಬೇರೆಯವರಿಗೆ ಸಿಕ್ಕಿಲ್ಲ. ಅಸೆಂಬ್ಲಿಗೆ ಬೇರೆ ಮನಸ್ಥಿತಿ ಇರುತ್ತದೆ, ಲೋಕಸಭೆ ಚುನಾವಣೆಯಲ್ಲೂ ಭಿನ್ನ ಪರಿಸ್ಥಿತಿ ಇರುತ್ತದೆ. ಕ್ಷೇತ್ರದಲ್ಲಿ ಪ್ರತಿಯೊಬ್ಬರು ಕೆಲಸ ಮಾಡಿದ್ದರು ಎಂದರು.
ಸಿಎಂ ಕ್ಷಮೆ ಕೇಳಿದ ವಿಚಾರವಾಗಿ, ಅದು ಅವರ ದೊಡ್ಡ ಗುಣ. ಸೋಲಿನ ಹಿನ್ನೆಲೆಯಲ್ಲಿ ಸಮಾಧಾನ ಮಾಡಿದ್ದಾರೆ ಎಂದರು. ಇನ್ನು ಜಿಲ್ಲೆಯಲ್ಲಿ ಸತೀಶ್ ಜಾರಕಿಹೊಳಿ, ಸವದಿ ಫೈಟ್ ವಿಚಾರವಾಗಿ, ಅದರ ಬಗ್ಗೆ ನಾನು ಜಾಸ್ತಿ ಮಾತಾನಾಡೋಲ್ಲ. ಏನೇ ಇದ್ರು ಕುಳಿತುಕೊಂಡು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಇಬ್ಬರು ದೊಡ್ಡ ನಾಯಕರು ಇದ್ದಾರೆ. ಏನೇ ಇದ್ರು ಕುಳಿತುಕೊಂಡು ಬಗೆಹರಿಸಿಕೊಳ್ಳಲಿ ಎಂದು ಸಲಹೆ ನೀಡಿದರು.