ಕಾಡಾನೆ ಧಾಳಿಯಿಂದ ಮೃತ ಪಟ್ಟ ಕಕ್ಕಬ್ಬೆ ನಾಲಡಿ ಗ್ರಾಮದ ಕಂಬೆಯಂಡ ಕುಟುಂಬದ ರಾಜ ದೇವಯ್ಯ ನವರ ಪಾರ್ಥಿವ ಶರೀರವನ್ನು ವೀಕ್ಷಿಸಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ತಕ್ಷಣವೇ ಪರಿಹಾರ ನೀಡುವ ಭರವಸೆಯನ್ನು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನೀಡಿದ್ದಾರೆ.
ಪಾಡಿ ಇಗ್ಗುತಪ್ಪ ದೇವಸ್ಥಾನದಲ್ಲಿ ತುಲಾಭಾರ ಒಪ್ಪಿಸಲು ಪತ್ನಿ ಕಾಂಚನ್ ರೊಂದಿಗೆ ಆಗಮಿಸಿದ್ದ ಪೊನ್ನಣ್ಣ ನವರು ದೇವಾಲಯದಲ್ಲಿದ್ದಾಗ ವಿಷಯ ಅರಿತು ತುಲಾಭಾರ ಸೇವೆಸಲ್ಲಿಸಿದ ತಕ್ಷಣವೇ ಕಕ್ಕಬ್ಬೆಗೆ ತೆರಳಿ ಅಂಬುಲೆನ್ಸ್ ನಲ್ಲಿದ್ದ ಮೃತರ ಶರೀರ ವೀಕ್ಷಣೆ ಮಾಡಿದ್ದಾರೆ.ಕೂಡಲೇ ಪರಿಹಾರ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್: 72 ಲಕ್ಷ ರೂ. ನ ಕ್ಯಾನ್ಸರ್ ಔಷಧ ಇನ್ಮುಂದೆ 3 ಲಕ್ಷಕ್ಕೆ ಸಿಗುತ್ತೆ
ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು ಪ್ರಾಣ ಹಾನಿಗೆ ಕಾರಣವಾದ ಆನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವ ಕುರಿತು ಈಗಾಗಲೇ ಅರಣ್ಯ ಸಚಿವರೊಂದಿಗೆ ದೂರವಾಣಿ ಕರೆ ಮಾಡಿ ಚರ್ಚಿಸಿದ್ದು ಆದಷ್ಟು ಬೇಗ ಆನೆ ಮತ್ತು ಮಾನವ ಸಂಘರ್ಷದ ಸಮಸ್ಯೆಯನ್ನು ಜಿಲ್ಲೆಯಲ್ಲಿ ಅಂತ್ಯಗೊಳಿಸಲು ಬದ್ದರಾಗಿದ್ದೇವೆ ಎಂದು ತಿಳಿಸಿದರು.
ಕೆಡಿಪಿ ಸದಸ್ಯರಾದ ಬಾಚಿಮಂಡ ಲವ ಚಿಣ್ಣಪ್ಪ,ಗ್ರಾಮ ಪಂಚಾಯತ್ ಸದಸ್ಯರಾದ ಕಲಿಯಂಡ ಸಂಪತ್,ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ಡಿಸಿಸಿ ಸದಸ್ಯರಾದ ಬೊಳ್ಳಂಡ ಶರಿ,ಮಂಜು,ಅಪ್ಪಚೆಟ್ಟೋಳಂಡ ಮಿಥುನ್,ಸೋಮಯ್ಯ ಸೇರಿದಂತೆ ಪ್ರಮುಖರು ಶಾಸಕರೊಂದಿಗೆ ಉಪಸ್ಥಿತರಿದ್ದರು.