ಗದಗ: ಪರಮಪೂಜ್ಯ ಗಾನಯೋಗಿ ಶಿವಯೋಗಿ ಲಿಂ. ಪಂ. ಪಂಚಾಕ್ಷರ ಗವಾಯಿಗಳವರ 80 ನೇ ಹಾಗೂ ಲಿಂ. ಪಂ. ಪುಟ್ಟರಾಜ ಕವಿ ಗವಾಯಿಗಳವರ 14 ನೇ ಪುಣ್ಯಸ್ಮರಣೋತ್ಸವ ಉಭಯ ಗುರುಗಳ ಜಾತ್ರಾ ಮಹೋತ್ಸವ ಜೂನ್ 22 ರಿಂದ 26 ರರ ವರೆಗೆ ನಡೆಯಲಿದೆ
ಈ ಕುರಿತು ವೀರೇಶ್ವರ ಪುಣ್ಯಾಶ್ರಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯ ಶ್ರೀ ಕಲ್ಲಯ್ಯಜ್ಜನವರು ಜೂನ್ 22 ರಿಂದ 26 ರರ ವರೆಗೆ ಕೀರ್ತನ, ಜಂಗಿ ಕುಸ್ತಿ, ಸಂಗೀತ, ಉಪನ್ಯಾಸ, ಅಂಧರಗೋಷ್ಠಿ ಹಾಗೂ ಗ್ರಂಥ ಬಿಡುಗಡೆ ಕಾರ್ಯಕ್ರಮ ಜರುಗಲಿವೆ.
ಜೂನ್ 26 ರಂದು ಉಭಯ ಗುರುಗಳ ಮಹಾರಥೋತ್ಸವ ಜರುಗಲಿದೆ. ಧರ್ಮೋತ್ತೇಜಕ ಮಹಾಸಭೆ ಹಾಗೂ ಅಹೋರಾತ್ರಿ ಸಂಗೀತ ಕಾರ್ಯಕ್ರಮಗಳು ಜರುಗುವವು.
ಜೊತೆಗೆ ಕತೃ ಗದ್ದುಗೆಗೆ ವೇದೋಕ್ತ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮ ಗದುಗಿನ ಶ್ರೀ ಕುಮಾರೇಶ್ವರ ವೈದಿಕ ಪಾಠಶಾಲೆ ಇವರಿಂದ ಹಾಗೂ ಆಶ್ರಮದ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಂತರ ಪ್ರತಿದಿನ ಬೆಳಿಗ್ಗೆ 7 ರಿಂದ 8 ಗಂಟೆವರೆಗೆ ಕೈವಲ್ಯ ಪಧ್ಧತಿ ಶಿವಯೋಗ ಕುರಿತು ಶಿವಾನುಭವವನ್ನು ರನ್ನಬೆಳಗಲಿ ಶಂಭುಲಿಂಗಾಶ್ರಮ ಸಿದ್ದಾರೋಡ ಮಠದ ಪೂಜ್ಯ ಶ್ರೀ ಕೃಷ್ಣೇಗೌಡ ಕೋಲೂರ ಮತ್ತು ವೇ. ಕುಮಾರ ಶಾಸ್ತ್ರೀಜಿ ಕರಿಕಟ್ಟಿ ಅವರಿಂದ ಜರುಗಲಿದೆ ಎಂದರು. ಪ್ರತಿನಿತ್ಯ ವೇದಿಕೆ ಕಾರ್ಯಕ್ರಮಗಳು ಜರುಗಲಿದ್ದು ವಿವಿಧ ಮಠಾಧೀಶರು ಸಾನಿದ್ಯ ವಹಿಸಲಿದ್ದಾರೆ. ವಿವಿಧ ಗಣ್ಯ ವ್ಯಕ್ತಿಗಳು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು ಅಪಾರ ಭಕ್ತರು ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಿವಲಿಂಗ ಶಾಸ್ತ್ರಿಗಳು
ಸಿದ್ದಾಪೂರ, ಸಿದ್ದೇಶ್ವರ ಶಾಸ್ತ್ರಿಗಳು
ತೆಲ್ಲೂರು, ವಿರೇಶ ಕಿತ್ತೂರ, ವಿರೇಶ್ವರ ಪುಣ್ಯಾಶ್ರಮದ ಸೋಲ್ ಟ್ರಸ್ಟನ ಅಧ್ಯಕ್ಷ ಎನ್.ಎಸ್.ಕೆಂಗಾರ, ಉಪಾಧ್ಯಕ್ಷ ಪ್ರಕಾಶ
ಬಸರಿಗಿಡದ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.