ಧಾರವಾಡ: “ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ ಅಂತಾ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹೇಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸಾಕಷ್ಟು ಜಾಹೀರಾತು ಕೊಡುತ್ತಾ ಇದ್ದಾರೆ. ಆದರೆ ನಾನು ಜೋಶಿ ನಾನು ಕೇಳಿದ ಪ್ರಶ್ನೆಗಳಿಗೆ ಅವರು ಈವರೆಗೆ ಉತ್ತರ ಕೊಟ್ಟಿಲ್ಲ’’ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಸಂತೋಷ ಲಾಡ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ ಸಚಿವರು, “ಪ್ರಲ್ಹಾದ್ ಜೋಶಿ ಅವರು ನಮ್ಮ ಜೊತೆ ಚರ್ಚೆಗೂ ಬರುತ್ತಿಲ್ಲ. ಕೆಲಸ ಮಾಡಿದ್ದರೆ ಮನೆಯಲ್ಲೇ ಉಳಿದು ವೋಟ್ ಕೇಳಬೇಕಲ್ವಾ. 4 ಲಕ್ಷ ಲೀಡ್ನಿಂದ ಗೆಲ್ಲುತ್ತೇವೆ ಅಂತಾರೆ. ಎಲ್ಲಾ ಟಿವಿ, ಪೇಪರ್ನಲ್ಲಿ ಸುಳ್ಳು ಜಾಹೀರಾತು ಕೊಡುತ್ತಿದ್ದಾರೆ. ಸುಳ್ಳು ಅಂಕಿ ಅಂಶದ ಜಾಹೀರಾತು ಕೊಡ್ತಾರೆ. ಮೂಲಭೂತ ಸೌಕರ್ಯ ದೇಶದ ಜನಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಒಂದೇ ರೂಂನಲ್ಲಿ ಗಂಡ-ಹೆಂಡತಿ, ಸ್ನೇಹಿತೆಯ ನಿಗೂಢ ಸಾವು: ವಾಮಾಚಾರಕ್ಕೆ ಬಲಿಯಾದ್ರಾ..?
ಒಂದು ಕಡೆ ನಿರ್ಮಲಾ ಸೀತಾರಾಮನ್ ಮೂರು ಕೋಟಿ ಜನರಿಗೆ ಮನೆ ಅಂತಾರ ಇನ್ನೊಂದು ಕಡೆಮೋದಿ ನಾಲ್ಕು ಕೋಟಿ ಮನೆ ಕೊಟ್ಟಿದೇವಿ ಅಂತಾರೆ. ಪ್ರಧಾನ ಮಂತ್ರಿ ಮನೆಗಳು ಎಲ್ಲೆಲ್ಲಿ ಬಂದಿವೆ ತೋರಿಸಿ ಪಿಎಂ ರಿಲೀಫ್ ಪಂಢ ಬಗ್ಗೆ ಮಾಹಿತಿ ಕೊಡಬೇಕು. ಅವರು ಮೊದಲು ಕೋವಿಡ್ ಸ್ಕ್ಯಾನ್ ಬಗ್ಗೆ ಮಾತನಾಡಲಿ. ಅದಾನಿ ಪೋರ್ಟ್ ನಲ್ಲಿ 34 ಸಾವಿರ ಕೋಟಿ ಈ ದೇಶದ ಡ್ರಗ್ಸ್ ಸಿಕ್ಕಿದೆ. ಅದರ ಬಗ್ಗೆ ಜೋಶಿ ಮಾತನಾಡಲಿ’’ ಎಂದು ಅವರು ಮರುಪ್ರಶ್ನೆ ಹಾಕಿದರು.