ಬೆಂಗಳೂರು:– ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಅವರ ಗೆಳತಿ ಪತ್ನಿ ಪವಿತ್ರಾ ಗೌಡ ಸೇರಿ ಒಟ್ಟು 13 ಮಂದಿಯನ್ನು ಬಂಧಿಸಲಾಗಿದೆ. ಎಲ್ಲರನ್ನು ನ್ಯಾಯಾಲಯ 6 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಇದ್ರ ಬೆನ್ನಲ್ಲೆ ದರ್ಶನ್ರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಕೂಗು ಜೋರಾಗಿದೆ.
Renukaswamy Murder Case: ದರ್ಶನ್ ಜೀಪ್ ನಲ್ಲಿತ್ತು ವ್ಯಾನಿಟಿ ಬ್ಯಾಗ್.. ಕೊಲೆ ಹಿಂದಿರುವ ಆ ಲೇಡಿ ಯಾರು!?
ಕಲಾಸಿಪಾಳ್ಯದಲ್ಲಿ ಹೀರೋ ಆಗಿ ರಾಜ್ಯದ ಜನರನ್ನ ರಂಜಿಸಿದ್ದ ತೂಗುದೀಪ್ ದರ್ಶನ್, ಇದೀಗ ಕಾಮಾಕ್ಷಿಪಾಳ್ಯದಲ್ಲಿ ವಿಲನ್ ಆಗಿ ಲಾಕ್ ಆಗಿದ್ದಾರೆ. ಕೋಟಿ ಕೋಟಿ ಅಭಿಮಾನಿಗಳ ಪಡೆಯನ್ನ ಹೊಂದಿರೋ ಮೆಜೆಸ್ಟಿಕ್ ನ ಸುಲ್ತಾನ ಇದೀಗ.. ಒಂದು, ಎರಡು, ಮೂರು ಅಂತ ಕಂಬಿ ಎಣಿಕೆ ಮಾಡ್ತಿದ್ದಾರೆ. ದರ್ಶನ್ ಜೊತೆಗೆ ತನ್ನ ಗೆಳತಿ ಪವಿತ್ರಾಗೌಡ, ಸೇರಿ 13 ಆರೋಪಿಗಳೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಸೆಲ್ ನಲ್ಲಿ ಡೋಲೋ 65 ಮಾತ್ರೆ ನುಂಗ್ತಿದ್ದಾರೆ. ಅಯ್ಯಯ್ಯೋ ಏನಾಗುತ್ತೋ ಅನ್ನೋ ಟೆನ್ಷ್ಯನ್ ನಲ್ಲಿರೋ ಆರೋಪಿಗಳು ಇನ್ನೂ ಐದು ದಿನ ಎಸಿಯಲ್ಲಿ ಜೀವನ ತ್ಯಜಿಸಿ, ಸೊಳ್ಳೆ, ತಿಗಣೆಗಳ ನಡುವೆ ಪರಿತಪಿಸಬೇಕಿದೆ. ವಿಶೇಷವಾಗಿ A2 ಆರೋಪಿತನಾಗಿರೋ ನಟ ದರ್ಶನ್ ಒಂದೇ ಒಂದು ಸಿಗರೇಟ್ ಗಾಗಿ ಪೊಲೀಸರಿಗೆ ಮನವಿ ಮಾಡ್ತಿದ್ದಾರಂತೆ.
ಹೌದು… ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನಕ್ಕೆ ಒಳಗಾಗಿದ್ದು ಚಂದನವನ ಸ್ತಬ್ಧವಾಗಿದೆ. ನಟನಾಗಿ ಸಮಾಜಕ್ಕೆ ಮಾದರಿಯಾಗಿರಬೇಕಿದ್ದ ದರ್ಶನ್ ಕೊಲೆ ಆರೋಪ ಸ್ಥಾನದಲ್ಲಿ ಕಂಬಿ ಎಣಿಸುತ್ತಿದ್ದಾರೆ. ಎದೆ ಮೇಲಕೆತ್ತಿ ನನ್ನ ಬಿಟ್ಟು ಯಾರು ಇಲ್ಲ ಅಂತ ನಡೆಯುತ್ತಿದ್ದ ಪೊರ್ಕಿ ಇದೀಗ ನನ್ನದೆ ಬಾಳಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ ಅಂತ ಕುರುಡನಾಗಿ ತಲೆ ಬಗ್ಗಿಸಿದ್ದಾರೆ.
ದರ್ಶನ್ ಲಾಕ್ ಆದ ಕೂಡಲೇ ಅಭಿಮಾನಿಗಳ ಸೈನ್ಯದ ಜೈ ಕಾರ ಒಂದು ಕಡೆ ಆದ್ರೆ, ಸಾಲು ಸಾಲು ಪ್ರಕರಣಗಳು ದಾಖಲಾಗುತ್ತಿದ್ದರೂ ಅವರನ್ನು ಚಿತ್ರರಂಗ ಏನೂ ಮಾಡದೆ ಸುಮ್ಮನೆ ಕುಳಿತಿದೆ. ದರ್ಶನ್ ವಿರುದ್ಧ ಗಟ್ಟಿಯಾದ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಒತ್ತಾಯ ಮಾಡಲಾಗ್ತಿದೆ. ಸರ್ವ ಸಂಘಟನೆಗಳ ಒಕ್ಕೂಟ ಇವತ್ತು ಪ್ರತಿಭಟನೆ ಮೂಲಕ ಆಕ್ರೋಶವನ್ನ ಹೊರಹಾಕಿದ್ದಾರೆ
ಪ್ರತಿಭಟನೆ ಹೆಚ್ಚಾಗ್ತಿದ್ದಂತೆ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ಎಂ ಸುರೇಶ್ ಅವರು ಈ ಕೇಸ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ದರ್ಶನ್ ಅವರು ಚಿತ್ರರಂಗದ ಮಾನ-ಮರ್ಯಾದೆ ಕಳೆದಿರುವುದಾಗಿ ಅವರು ಹೇಳಿದ್ದಾರೆ ಎನ್ನಲಾಗುತ್ತಿದೆ. ಒಂದೊಮ್ಮೆ ಆರೋಪ ಸಾಬೀತಾದರೆ ಅವರ ಮೇಲೆ ನಿಷೇಧ ಹೇರುವುದಾಗಿಯೂ ಸುದ್ದಿ ಹರಿದಾಡ್ತಿದೆ. ಜೊತೆಗೆ ಈ ವಿಚಾರದಲ್ಲಿ ಕಲಾವಿದರ ಸಂಘದವರ ನಿರ್ಧಾರವೂ ತೆಗೆದುಕೊಳ್ಳಲಿದ್ದು, ಮುಂದೆ ಡಿ ಬಾಸ್ ರೌಧ್ರನರ್ತನದ ಭವಿಷ್ಯ ಏನಾಗುತ್ತೋ ಕಾದು ನೋಡಬೇಕಿದೆ.