ಬೆಂಗಳೂರು:– ತೈಲ ಬೆಲೆ ಏರಿಕೆ ಖಂಡಿಸಿ ಇಂದು ವಿಧಾನಸೌಧಕ್ಕೆ ಜೆಡಿಎಸ್ ನಾಯಕರು ಮುತ್ತಿಗೆ ಹಾಕಲಿದ್ದಾರೆ.
ಫ್ರೀಡಂ ಪಾರ್ಕ್ನಿಂದ (reedom park ) ಹೊರಟು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದು, ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ಹಾಲಿ ಮಾಜಿ ಶಾಸಕರು, ಪರಿಷತ್ ಸದಸ್ಯರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ಇಂಧನ ಬೆಲೆ ಹೆಚ್ಚಳವನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು, ಡಿಸೇಲ್ ಪೆಟ್ರೋಲ್ ದು ಗೃಹ ಲಕ್ಷೀ ಸೇರಿದಂತೆ ಗ್ಯಾರಂಟಿ ಯೋಜನೆಗಳಿಗೆ ಹಣ ಬೇಕಿದೆ. ಹಣದ ಸಮಸ್ಯೆ ತಿಳಿದು ಅದೇ ದುಡ್ಡನ್ನ ಜನಗಳ ಮೇಲೆ ಹಾಕಿ, ತೆರಿಗೆ ವಿಧಿಸಿ ಅವರಿಂದಲೇ ದುಡ್ಡು ವಸೂಲಿ ಮಾಡಿ ಈ ಕಾರ್ಯಕ್ರಮಗಳು ಮುಂದುವರೆಸಬೇಕಿದೆ. ಅದಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು