ಬಳ್ಳಾರಿ ವಿಜಯನಗರ ಲೋಕಸಭಾ ಚುನಾವಣೆ ಅಖಾಡ ರಂಗೇರುತ್ತೀದೆ.ಬಿಜೆಪಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರ ನಿವಾಸದಲ್ಲಿ ೨೦ ಕ್ಕೂ ಹೆಚ್ಚು ಜೆ.ಡಿಎಸ್.ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು. ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಪಿ ಎಸ್ ಸೋಮಲಿಂಗನಗೌಡ ಅವರು ಮತ್ತು ಪದಾಧಿಕಾರಿಗಳಾದ ಬಂಡೆಗೌಡ ಬಳ್ಳಾರಿ. ಲಕ್ಷ್ಮಿಕಾಂತ್ ಗೌಡ ಜೋಳದರಾಶಿ, ವಾದಿರಾಜ ಶೆಟ್ಟರು. ಬಳ್ಳಾರಿ,ಹೊನ್ನರ ಸ್ವಾಮಿ ,ಹನುಮಂತಪ್ಪ ಚರಕುಂಟೆ. ಕೆ ಹಂಪನಗೌಡ ಬಳ್ಳಾರಿ, ಆರ್ ಬಿ ರುದ್ರೇಗೌಡ,
ಆರ್ ಎಸ್ ಶಿವರುದ್ರಗೌಡ ಅವರು ಸೇರಿದಂತೆ ಎಂ ರಾಮನ ಗೌಡ್ರು,ಎ ರಾಜೇಗೌಡ. ಶಿವನಗೌಡ ಮೀನಹಳ್ಳಿ, ನಾರಾಯಣ ರೆಡ್ಡಿ ದಮ್ಮೂರು, ಹೇಮರೆಡ್ಡಿ ಮದಿರೆ, ಕೇದಾರ ಗೌಡ ಬಳ್ಳಾರಿ, ವಿಶ್ವನಾಥ ಸ್ವಾಮಿ ಕುರುಗೋಡು. ಅವರು ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಇದೇ ವೇಳೆಗೆ ವಿಧಾನಪರಿಷತ್ ಸದಸ್ಯರಾದ ವೈ.ಎಂ.ಸತೀಶ್. ರಾಜ್ಯ ಎಸ್ ಟಿ ಮೋರ್ಚಾ ಉಪಾಧ್ಯಕ್ಷರಾದ ಓಬಲೇಶ್, ಬಿಜೆಪಿ ಪಕ್ಷದ ಬಳ್ಳಾರಿ ಗ್ರಾಮಾಂತರ ಉಪಾಧ್ಯಕ್ಷರಾದ ವಿಕೆ ಬಸಪ್ಪ ಪಕ್ಷದ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.