ಗದಗ: ನಾಳೆ ಜಾತ್ರೆ ಹಿನ್ನೆಲೆ ಗದಗನ ಶಿವಾನಂದ ಮಠದ ಶ್ರೀಗಳ ಗುದ್ದಾಟ ಮತ್ತೇ ಮುಂದುವರೆದಿದೆ. ಆದ್ದರಿಂದ ಮಠಕ್ಕೆ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎರಡು KSRP ತುಕಡಿ, 02 DAR ತುಕಡಿ, ಹೆಚ್ಚುವರಿ ಎಸ್ಪಿ, 2 DSP, 10 CPI, 12 ಜನ PSI ಸೇರಿ 80 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದ್ದು, ಮಠದಲ್ಲಿ ಭಕ್ತರಿಗಿಂತ ಪೊಲೀಸರ ಸಂಖ್ಯೆಯೇ ಹೆಚ್ಚು ಇದ್ದಾರೆ.
ನಾಳೆ ಶಿವಾನಂದ ಮಠದ ಜಾತ್ರಾ ಮಹೋತ್ಸವ ಹಿನ್ನೆಲೆ ಹಿರಿಯ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿಗಳ ನಡುವಿನ ಹಗ್ಗ ಜಗ್ಗಾಟ ನಿಲ್ಲುತ್ತಿಲ್ಲ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹಿರಿಯ ಶ್ರೀಗಳ ನಿರಾಕರಣೆ ಆರೋಪ ಮಾಡಿ ಉಭಯ ಶ್ರೀಗಳ ಜೊತೆ ಪೊಲೀಸ್ ಅಧಿಕಾರಿಗಳ ಮಾತುಕತೆ ನಡೆಸಿ ಮನವೊಲಿಸಲು ಯತ್ನಸಿದ್ದಾರೆ.