ಗದಗ: ನಾಳೆ ಡಾ. ಬಿ ಆರ್ ಅಂಬೆಡ್ಕರ್ ಅವರ ಜಯಂತಿ ಹಿನ್ನೆಲೆ, ಅಂದು ಮನುಕುಲಕ್ಕಾಗಿ ಇಂದು ಮನುಕುಲದ ಸಮಾನತೆಗಾಗಿ ಜಾಥಾವನ್ನು ನಾಳೆ ದಿನಾಂಕ 14/04/2024 ರಂದು ಸಂಜೆ 4 ಘಂಟೆಗೆ ಗದುಗಿನ ಶ್ರೀ ತೋಂಟದಾರ್ಯ ಮಠದಿಂದ ಹಮ್ಮಿಕೊಳ್ಳಲಾಗಿದೆ ಎಂದು ಯುವ ಮುಖಂಡ ಹಾಗೂ ಸಮಾನತೆ ಮಂದಿರ ಪ್ರತಿಷ್ಠಾಪನಾ ಸಮಿತಿಯ ಅನಿಲ್ ಮೆಣಸಿನಕಾಯಿ ಹೆಳಿದ್ರು.
ಗದಗ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಂವಿಧಾನದ ಸಂದೇಶದ ಸಮಪಾಲು, ಸಮಬಾಳು, ಬುಧ್ಧ, ಬಸವ, ಅಂಬೇಡ್ಕರ್, ಶರೀಫರ ನುಡಿಯ ನಡೆಯಂತೆ ನಾವೆಲ್ಲಾ ಒಂದೆ ಎಂಬ ತತ್ವದೊಂದಿಗೆ ಈ ಜಾಥಾವನ್ನು ಹಮ್ಮಿಕೊಂಡಿದ್ದೇವೆ.
ಇದಾಗಲೇ ಗದಗ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಸಮಾನತೆ ಮಂದಿರ ಶೀಘ್ರ ಸ್ಥಾಪನೆ ಮಾಡುತ್ತೇವೆ ಜಮೀನು ಹಸ್ತಾಂತರ ಪ್ರಕ್ರಿಯೆ ಕೂಡಾ ನಡೆದಿದೆ. ರಾಮ, ಬುಧ್ದ ,ಬಸವ, ಅಂಬೇಡ್ಕರ್, ಶರೀಫರ ಮೂರ್ತಿಗಳನ್ನು ತೋಂಟದಾರ್ಯ ಮಠದಿಂದ ಮೆರವಣಿಗೆ ಪ್ರಾರಂಭಿಸಿ ನಮ್ಮ ಮನೆಯಲ್ಲಿ ಪ್ರತಿಷ್ಠಾಪನೆ ಮಾಡುತ್ತೇವೆ. ಕಲಾ ತಂಡ, ಕುಂಭ ಮೇಳದೊಂದಿಗೆ ಮೆರವಣಿಗೆ ಸಾಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಲಿದ್ದಾರೆ ಎಂದ್ರು.