ಬೆಳಗಾವಿ:- ಇಟ್ಟಂಗಿ ಕಾರ್ಮಿಕರಿಗೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ & ಟೀಮ್ ನಿಂದ ಟಾರ್ಚರ್ ಕೊಡುತ್ತಿದ್ದಾರೆ.
ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ವಿಠಲ್ ಹಲಗೇಕರ್ ಇಂದು ಪ್ರವಾಸಿಮಂದಿರದಲ್ಲಿ ನಮ್ಮ ನ್ಯೂಸ್ ಸಮೂಹದೊಂದಿಗೆ ಮಾತನಾಡಿ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಮತ್ತು ಬೆಂಬಲಿಗರು ಖಾನಾಪುರ ತಾಲ್ಲೂಕಿನಾದ್ಯಂತ ಇರುವ ಇಟ್ಟಂಗಿಗಳ ನಿರ್ಮಾಣ ಕಾರ್ಮಿಕರು ವಾಹನಗಳ ಮೂಲಕ ಮಣ್ಣು ತೆಗೆದುಕೊಂಡು ಹೋಗಲು ಅಧಿಕಾರಿಗಳ ಮೇಲೆ ಒತ್ತಡತಂದು ಪೊಲೀಸ್ ಮತ್ತು ಗಣಿ ಅಧಿಕಾರಿಗಳ ಮೂಲಕ ಒತ್ತಡ ತಂದು ವಾಹನಗಳನ್ನು ತಡೆಯುವುದು ಮಾಡುತ್ತಿದ್ದಾರೆ. ಇದರಿಂದ ಈ ಹಿಂದೆ ನಾವು ಎಂದು ಈ ರೀತಿ ಮಾಡಿಲ್ಲ, ಈಗ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅನವಶ್ಯಕವಾಗಿ ಖಾನಾಪುರ ತಾಲ್ಲೂಕು ಆಡಳಿತದಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.