ಕೊಲೆ ಕೇಸ್ ನಲ್ಲಿ ಜೈಲು ಹಕ್ಕಿಯಾಗಿರುವ ನಟ ದರ್ಶನ್ ಗೆ ಇದೀಗ ಮತ್ತಷ್ಟು ಸಂಕಷ್ಟ ಎದುರಾಗಿದೆ.. ಪ್ರತ್ಯೇಕವಾಗಿ ಮತ್ತೆರಡು ಪ್ರಕರಣದಲ್ಲಿ ನಟ ದರ್ಶನ್ ರನ್ನ ವಿಚಾರಣೆ ಮಾಡಿದ್ದು, ತನಿಖಾಧಿಕಾರಿ ಮುಂದೆ ತಪ್ಪೊಪ್ಪಿಕೊಂಡಿದ್ದಾರಂತೆ ದಾಸ.. ಹಾಗಾದರೆ ತನಿಖೆಯಲ್ಲಿ ಏನಿಲ್ಲಾ ವಿಚಾರಗಳು ನಡೆದಿದೆ ಅನ್ನೋದನ್ನ ಹೇಳ್ತೀವಿ ನೋಡಿ…
ಬೆಂಗಳೂರು ಜೈಲಿಗೆ ನಟ ದರ್ಶನ್ ಶಿಫ್ಟ್: ಹೆಂಡತಿ ಬಂದು ಹೋದ ಮೇಲೆ ಕರಿಯ ಫುಲ್ ಆ್ಯಕ್ಟೀವ್!
ಯೆಸ್…ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ ಹಾಗೂ ಆತನ ಗ್ಯಾಂಗ್ ಇದೀಗ ರಾಜ್ಯದ ಮೂಲೆಮೂಲೆಗಳ ಕಾರಾಗೃಹಗಳಿಗೆ ದಿಕ್ಕಾಪಾಲಾಗಿದ್ದಾರೆ.. ಒಂದು ವಾರಗಳ ಹಿಂದೆ ಜೈಲಿನಲ್ಲಿ ನಟ ದರ್ಶನ ರಾಜಾತಿಥ್ಯ ಅನುಭವಿಸ್ತಾ ಆರಾಮವಾಗಿ ಇದ್ದರು.. ಅದಾದ ಬಳಿಕ ಊಟ ಸರಿಯಾಗಿ ಇಲ್ಲ.. ಬೆಡ್ ಸರಿಯಲ್ಲ ಅಂತಾ ನ್ಯಾಯಾಲಯ ಮೊರೆ ಹೋಗಿದ್ದರು ನಟ ದರ್ಶನ್… ಅದಾದನಂತರ ಜೈಲಿನಲ್ಲಿ ನಟ ದರ್ಶನ ಹಾಗೂ ರೌಡಿಗಳ ಜೊತೆಯಲ್ಲಿ ಕುಳಿತು ಕಾಫಿ ಕುಡಿತ ಸಿಗರೆಟ್ ಸೇದಿರೋ ಪೋಟೋ ಹಾಗೂ ರೌಡಿಶೀಟರ್ ಧರ್ಮನ ಮೊಬೈಲ್ ವಿಡಿಯೋ ಕಾಲ್ ನಲ್ಲಿ ಮಾತಾನಾಡಿರೋ ವಿಚಾರವಾಗಿ ದರ್ಶನ್ ವಿರುದ್ಧ ಪರಪ್ಪನ ಅಗ್ರಹಾರದಲ್ಲಿ ಎರಡು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗಪೊಲೀಸ್ ವಿಚಾರಣೆ ವೇಳೆ ನಟ ದರ್ಶನ ತಪ್ಪೊಪ್ಪಿಕೊಂಡಿದ್ದಾರಂತೆ
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ ಹಾಗೂ ಸಹಚರರು ಇರುವ ವೇಳೆ, ರೌಡಿಗಳ ಜೊತೆ ಇರೋ ಪೋಟೋ ಹಾಗೂ ವಿಡಿಯೋ ಕಾಲ್ ವಿಚಾರವಾಗಿ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಬಳ್ಳಾರಿಗೆ ಹೋಗುವ ಮುಂಚೆ ನಟ ದರ್ಶನರನ್ನ ವಿಚಾರಣೆ ನಡೆಸಿದ್ದು. ತನಿಖಾಧಿಕಾರಿ ವಿಚಾರಣೆ ವೇಳೆ ದರ್ಶನ ಹೇಳಿಕೆ ನೀಡಿದ್ದಾರೆ.. ಹೌದು ಮೊಬೈಲ್ನಲ್ಲಿ ಮಾತಾಡಿದ್ದು ನಿಜ ಆದ್ರೆ ಧರ್ಮ ಎಂಬುವನ ಒತ್ತಾಯಕ್ಕೆ ಮಣಿದು ಆತನ ಸ್ನೇಹಿತನ ಜೊತೆಗೆ ಮಾತಾನಾಡಿದ್ದೀನಿ. ನಾನು ಯಾವತ್ತೂ ಜೈಲಿನಲ್ಲಿ ಮೊಬೈಲ್ ಬಳಸಿಲ್ಲ ಎಂದಿರೋ ದರ್ಶನ್, ಅಲ್ಲದೇ ನಾನು ಜೈಲಿಗೆ ಬಂದ ಬಳಿಕ ಧರ್ಮ ನನ್ನ ಭೇಟಿಯಾಗಿ ಪರಿಚಯಿಸಿಕೊಂಡ ಧರ್ಮ ನನ್ನ ಬ್ಯಾರಕ್ನಲ್ಲೇ ಇದ್ದ, ಹಾಗಾಗಿ ಜೈಲಲ್ಲಿ ಬೇಸರ ಕಳೆಯಲು ಆತನ ಜೊತೆ ಮಾತನಾಡಿದ್ದೆ ಅಷ್ಟೆ. ನನ್ನ ಗೆಳೆಯರೆಲ್ಲಾ ನಿಮ್ಮ ಅಭಿಮಾನಿಗಳು ಎಂದು ಧರ್ಮ ಹೇಳಿದ್ದ
ನನ್ನ ಗೆಳೆಯ ಸತ್ಯ ಎಂಬಾತ ನಿಮ್ಮ ಕಟ್ಟಾ ಅಭಿಮಾನಿ ಎಂದಿದ್ದ ಧರ್ಮ ನಾನು ಯಾರಿಗೂ ತಿಳಿಯದಂತೆ ಮೊಬೈಲ್ ಬಳಸುತ್ತೇನೆ ಎಂದಿದ್ದನಂತೆ.. ನೀವು ಒಂದು ಸಾರಿ ನನ್ನ ಫ್ರೆಂಡ್ ಬಳಿ ಮಾತಾಡಬೇಕು ಎಂದಿದ್ದ ಆತನ ಒತ್ತಾಯಕ್ಕೆ ಮಣಿದು ಎರಡ್ಮೂರು ಸೆಕೆಂಡ್ ಮಾತಾಡಿದ್ದೆ ಅದೇ ದೊಡ್ಡ ತಪ್ಪಾಯಿತು ಎಂದಿರೋ ನಟ ದರ್ಶನ್…
ಇನ್ನು ವಿಲ್ಸನ್ ಗಾರ್ಡನ್ ರೌಡಿಶೀಟರ್ ನಾಗ ನನ್ನನ್ನು ಕಾಫಿ ಕುಡಿಲಿಕ್ಕೆ ಹಾಗೂ ಸಿಗರೇಟ್ ಸೇದ್ಲಿಕ್ಕೆ ಕರೆಯುತ್ತಿದ್ದ.. ಆ ದಿನ ಕೂಡ ಆತನ ಒತ್ತಾಯದ ಮೇರೆಗೆ ಹೋಗಿದ್ದೆ ಅಲ್ಲಿ ಕುಳಿತಾಗ ಯಾರೋ ಫೋಟೋ ತೆಗೆದಿದ್ದಾರೆ..ಆದ್ರೆ ಟೀ ಸಿಗರೇಟ್ ಎಲ್ಲಿಂದ ಬಂತು ತನಗೆ ಗೊತ್ತಿಲ್ಲ ಅಂತಾ ದರ್ಶನ್ ತನಿಖಾಧಿಕಾರಿಗಳ ಮುಂದೆ ಹೇಳಿದ್ದಾರೆ..ಅಲ್ಲದೇ ನಟ ದರ್ಶನ್ ಮೊಬೈಲ್ ವಿಡಿಯೋ ವೈರಲ್ ಅಗುತ್ತಿದ್ದಂತೆ ರೌಡಿಶೀಟರ್ ಧರ್ಮ ತನ್ನ ಬಳಿ ಇದ್ದ ಮೊಬೈಲ್ ಪೊಲೀಸರಿಗೆ ಸಿಕ್ರೆ ಮತ್ತಷ್ಟು ಸಮಸ್ಯೆ ಅಂತಾ ಚಚ್ಚಿ ಹಾಕಿದ್ದಾನೆ..ಹೀಗಾಗಿ ಇದುವರೆಗೂ ಆ ಮೊಬೈಲ್ ಜಪ್ತಿಯಾಗಿಲ್ಲ ವಿಚಾರಣೆ ವೇಳೆ ಮೊಬೈಲ್ ನಾಶದ ಬಗ್ಗೆ ಧರ್ಮ ಒಪ್ಪಿಕೊಂಡಿದ್ದಾನೆ. ಆದ್ರೆ, ಮೊಬೈಲ್ ಪತ್ತೆ ಕಾರ್ಯವೇ ಅಧಿಕಾರಿಗಳಿಗೆ ದೊಡ್ಡ ಸವಾಲು ಅಗಿದೆ.