ಇದು RCBಯ ಹೊಸ ಅಧ್ಯಾಯ ಎಂದು ಕನ್ನಡದಲ್ಲೇ ಹೇಳಿದ ಕೊಹ್ಲಿಯ ಮಾತಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ಅನ್ಬಾಕ್ಸ್ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಮಾತನಾಡುವ ಮೂಲಕ ವಿರಾಟ್ ಕೊಹ್ಲಿ ಕನ್ನಡಿಗರ ಮನಸೊರೆಗೊಂಡರು. ಅಲ್ಲದೆ ಗ್ಯಾಲರಿಯಲ್ಲಿ ನೆರೆದಿದ್ದ ಕನ್ನಡಿಗರನ್ನು ಚಕಿತಗೊಳಿಸಿದರು.
ರಂಗು ರಂಗಿನಿಂದ ಕೂಡಿದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಕಿಂಗ್ ಕೊಹ್ಲಿ, ಇದು ಆರ್ಸಿಬಿ ತಂಡದ ಹೊಸ ಅಧ್ಯಾಯ ಎನ್ನುವ ಮೂಲಕ, ಈ ಬಾರಿಯ ಐಪಿಎಲ್ನಲ್ಲಿ ಹೊಸ ಭಾಷ್ಯಕ್ಕೆ ಮುನ್ನಡಿ ಬರೆಯುವ ಸೂಚನೆ ನೀಡಿದರು.
ಏಕೆಂದರೆ ಈಗಾಗಲೇ ಆರ್ಸಿಬಿ ಮಹಿಳಾ ತಂಡವು ವುಮೆನ್ಸ್ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಹೆಸರಿನ ಬದಲಿಗೆ ಈ ಬಾರಿ ಆರ್ಸಿಬಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರಿನಲ್ಲಿ ಕಣಕ್ಕಿಳಿಯಲಿದೆ.
ಹೆಸರಿನ ಬದಲಾವಣೆಯೊಂದಿಗೆ ಆರ್ಸಿಬಿ ತಂಡದ ಜೆರ್ಸಿ ಬಣ್ಣ ಕೂಡ ಬದಲಾಗಿದೆ. ಈ ಹಿಂದೆಯಿದ್ದ ಕಪ್ಪು-ಕೆಂಪು ಬಣ್ಣಗಳ ಬದಲಿಗೆ ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ನೀಲಿ-ಕೆಂಪು ಬಣ್ಣಗಳ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.
ಇತ್ತ ಹಲವು ಬದಲಾವಣೆಯೊಂದಿಗೆ ಹೊಸ ಸೀಸನ್ ಆರಂಭಿಸಲಿರುವ ಹೊರಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಅಧ್ಯಾಯಕ್ಕೆ ನಾಂದಿಯಾಡಲಿದೆ ಎಂದು ವಿರಾಟ್ ಕೊಹ್ಲಿ ಘೋಷಿಸಿದ್ದಾರೆ. ಅದು ಕೂಡ ಕನ್ನಡದಲ್ಲಿ ಎಂಬುದು ವಿಶೇಷ.