ಬೆಂಗಳೂರು:- ಡಿಕೆ ಸುರೇಶ್ ಆಪ್ತರಾದ ಕೋಣನಕುಂಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ಹಾಗೂ ಮಾಜಿ ಕಾರ್ಪೊರೇಟರ್ ಗಂಗಾಧರ್ ಅವರ ಮನೆ ಮೇಲೆ ಐಟಿ ದಾಳಿ ನಡೆದಿದೆ. ಇನ್ನು ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಅಂತ ಡಿಕೆ ಶಿವಕುಮಾರ್ ಆಕ್ರೋಶದ ಮಾತುಗಳನ್ನಾಡಿದ್ದಾರೆ.
High Court: ಹೈಕೋರ್ಟ್ ನಿಂದ ಬಿಜೆಪಿ ಶಾಸಕನಿಗೆ ಸಿಕ್ತು ಬಿಗ್ ರಿಲೀಫ್ – ಕಾರಣ ಇಲ್ಲಿದೆ!
ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಡಿ.ಕೆ. ಸುರೇಶ್ ಆಪ್ತರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಡಿಕೆ ಸುರೇಶ್ ಆಪ್ತರಾದ ಆಪ್ತರಾದ ಕೋಣನಕುಂಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ಹಾಗೂ ಮಾಜಿ ಕಾರ್ಪೊರೇಟರ್ ಗಂಗಾಧರ್ ಮನೆ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಐಟಿ ದಾಳಿ ನಡೆಸಿದೆ.
ಇನ್ನು ಡಿಕೆ ಸುರೇಶ್ ಆಪ್ತರ ಮೇಲಿನ ಐಟಿ ದಾಳಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಡಿಕೆ ಸುರೇಶ್ ಅವರನ್ನು ಟಾರ್ಗೆಟ್ ಮಾಡಿ, ಅವರ ಆಪ್ತರ ಮೇಲೆ ನಿರಂತರ ಐಟಿ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಮಾಜಿ ಕಾರ್ಪೋರೆಟರ್ ಗಂಗಾಧರ್ ಮನೆ ಬಳಿ ಜಮಾಯಿಸಿ, ಬಿಜೆಪಿ ವಿರುದ್ದ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ರು.
ಡಿಕೆ ಶಿವಕುಮಾರ್, ಡಿಕೆ ಸುರೇಶ್ ಅವರನ್ನ ಬಗ್ಗು ಬಡಿಯಲು ಈ ರೀತಿ ಮಾಡ್ತಿದ್ದಾರೆ. ಕಾಂಗ್ರೆಸ್ನ ಸಣ್ಣ ಕಾರ್ಯಕರ್ತರ ಮನೆ ಮೇಲೂ ದಾಳಿ ಮಾಡ್ತಿದ್ದಾರೆ. ನಾವು ಭಯದಲ್ಲೇ ಬದುಕುವ ಪರಿಸ್ಥಿತಿ ನಿರ್ಮಾಣ ಆಗಿದೆ ಅಂತ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ರು.
ಇನ್ನು ಡಿಕೆ ಸುರೇಶ್ ಆಪ್ತರ ಮನೆ ಮೇಲಿನ ಐಟಿ ದಾಳಿ ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ರು. ಐಟಿ ಅಧಿಕಾರಿಗಳು ಕೆಲಸ ಮಾಡಲು ಬಿಡದೆ ಎರಡು ದಿನಗಳ ಕಾಲ ತಡೆದ್ರು. ಇವತ್ತು ಬ್ಲಾಕ್ ಅಧ್ಯಕ್ಷರು, ಕಾರ್ಯಕರ್ತರ ಮನೆ ಮೇಲೆ ರೈಡ್ ಮಾಡಿದ್ದಾರೆ. ಅವ್ರು ನಮ್ಮಮೇಲೆ ಕೆಟ್ಟ ಹೆಸರು ತರೋಕೆ ಈ ರೀತಿ ಮಾಡುತ್ತಿದ್ದಾರೆ ಅಂತ ಡಿಕೆಶಿ ಆರೋಪಿಸಿದ್ರು.