ದಾವಣಗೆರೆ: ಕೆಲವು ಬಾರಿ ನಾವು ದೇವರು ಇದ್ದಂತೆ ಇರಬೇಕು. ಕೆಲವು ಬಾರಿ ದೇವರು ಪ್ರತ್ಯಕ್ಷರಾಗ್ತಾರೆ, ಮಾಯವಾಗ್ತಾರೆ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಶಾಸಕರು, ಇದೆಲ್ಲಾ ಭಗವಂತನ ಇಚ್ಚೆ. ನಾವು ದೇವರು ಇದ್ದಂತೆ ಇದ್ದರೇ ಬಹಳ ಒಳ್ಳೆಯದು. ನಾಲ್ಕು ಗೋಡೆಗಳ ಮಧ್ಯೆ ಏನು ಹೇಳಬೇಕೋ ಎಲ್ಲವನ್ನೂ ಹೇಳಿದ್ದೇವೆ. ಎಲ್ಲವೂ ಚರ್ಚೆಯಾಗಿದೆ. ನಾನು ಮೌನಕ್ಕೆ ಜಾರುತ್ತೇನೆ ಎಂದರು.
ಕ್ರೆಡಿಟ್ ಕಾರ್ಡ್ʼದಾರರಿಗೆ ಬಿಗ್ ಅಪ್ಡೇಟ್..! ಏಪ್ರಿಲ್ 1 ರಿಂದ ನಿಯಮದಲ್ಲಿ ಬದಲಾವಣೆ
ಇನ್ನು, ಬೇಡಿಕೆ ಈಡೇರಿಸುವ ಸಂಬಂಧ ಹೈಕಮಾಂಡ್ನಿಂದ ಭರವಸೆ ನೀಡಲಾಗಿದೆಯಾ? ಸಭೆ ತೃಪ್ತಿ ತಂದಿದೆಯಾ ಎಂಬ ಪ್ರಶ್ನೆಗೆ ಧನ್ಯವಾದ, ಧನ್ಯವಾದ ಎಂದಷ್ಟೇ ಹೇಳಿ ತೆರಳಿದರು. ಕೆಲವೊಮ್ಮೆ ರೆಬೆಲ್ ಆಗ್ತೀರಿ, ಕೆಲವೊಮ್ಮೆ ಸೈಲೈಂಟ್ ಆಗ್ತೀರಿ ಜನ ನೀವು ರಾಜಕೀಯ ಆಟವಾಡುತ್ತೀದ್ದೀರಿ ಎಂದು ಹೇಳುತ್ತಾರೆ ಎಂದು ಕೇಳಿದ ಪ್ರಶ್ನೆಗೆ, ನಾನು ಆಟ ಆಡುವುದಿಲ್ಲ. ಈಗಲೂ ನಾವೆಲ್ಲರೂ ಒಂದೇ. ನಾವೆಲ್ಲರೂ ಬೇರೆ ಏನೂ ಇಲ್ಲ. ಈಗಲೂ ಕುಳಿತು ಚರ್ಚೆ ಮಾಡುತ್ತೇವೆ. ಸಮಸ್ಯೆ ಪರಿಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.