ಮೈಸೂರು: “ಚಾಮುಂಡೇಶ್ವರಿ ಕ್ಷೇತ್ರ ಮಡಿಲಿಗೆ ಬಂದಿದ್ದಾರೆ ಯದುವೀರ್ ಒಡೆಯರ್. ಯದುವೀರ್ ಗೆ ವೋಟ್ ಹಾಕಿದ್ರೆ ಚಾಮುಂಡೇಶ್ವರಿಗೆ ಹೂವು ಹಾಕಿದಂತೆ. ಅವರನ್ನು ಗೆಲ್ಲಿಸಬೇಕೆಂದು ಎಚ್ ಡಿ ದೇವೇಗೌಡರು ಮತ್ತು ಎಚ್ ಡಿ ಕುಮಾರಸ್ವಾಮಿ ಸಹ ತಿಳಿಸಿದ್ದಾರೆ. ಹಾಗಾಗಿ ಯದುವೀರ್ ಅವರನ್ನು ಗೆಲ್ಲಿಸುವುದು ನಮ್ಮ ಜವಾಬ್ದಾರಿ. ”
– ಇದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮೈಸೂರು ರಾಜವಂಶಸ್ಥರಾದ ಯದುವೀರ್ ಒಡೆಯರ್ ಅವ ಸ್ಪರ್ಧೆಗೆ ಜೆಡಿಎಸ್ ಬೆಂಬಲ ಕುರಿತಾಗಿ ಮಾಜಿ ಸಚಿವ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾಗಿರುವ ಜಿಟಿ ದೇವೇಗೌಡ ಅವರ ಮಾತುಗಳು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶುಕ್ರವಾರ ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರನ್ನು ಭೇಟಿ ಮಾಡಿ ತಮ್ಮ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು.
ಪಿಯುಸಿ ಪಾಸಾದವರಿಗೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ ₹63,000 ಸಂಬಳ! ಈಗಲೇ ಅರ್ಜಿ ಸಲ್ಲಿಸಿ
ಈ ಸಂದರ್ಭದಲ್ಲಿ ಮಾತನಾಡಿದ ಜಿಟಿ ದೇವೇಗೌಡ ಅವರು, ಜೆಡಿಎಸ್ ಮತದಾರರು ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಗೆ ಹಾಕುವ ಪ್ರತಿಯೊಂದು ಮತವೂ ಚಾಮುಂಡೇಶ್ವರಿಗೆ ಹೂ ಸಮರ್ಪಿಸಿದಂತೆ ಎಚ್ ಡಿ ಕುಮಾರಸ್ವಾಮಿ ಮತ್ತು ನಾನು ಬರುವಾಗ ಯದುವೀರ್ ಗೆಲ್ಲಿಸಲೇಬೇಕೆಂದು ದೇವೇಗೌಡರು ಕರೆ ಮಾಡಿ ಹೇಳಿದರು. ಯದುವೀರ್ ಅವರನ್ನು ಗೆಲ್ಲಿಸಿ ಅಂದರು .ಈ ನಿಟ್ಟಿನಲ್ಲಿ ಪ್ರಯತ್ನ ಮಾಡ್ತೇನೆ ಎಂದು ಹೇಳಿದರು. ಹಿಂದೆ ಬಿಜೆಪಿ ಮತ್ತು ಜೆಡಿಎಸ್ ಸೇರಿದರೆ ಆಗ್ತಿರಲಿಲ್ಲ.
ಈವಾಗ ಜನರೇ ಹೇಳ್ತಾರೆ ಮೊದಲು ಜೊತೆ ಸೇರಿ ಅಂತ. ಚಾಮುಂಡೇಶ್ವರಿ ಕ್ಷೇತ್ರ ಮಡಿಲಿಗೆ ಬಂದಿದ್ದಾರೆ ಯದುವೀರ್ ಒಡೆಯರ್. ರಾಜರ ಋಣ ತೀರಿಸಲು ಒಂದು ಅವಕಾಶ ಕೊಟ್ಟಿದ್ದಾರೆ. ಎಂಪಿ ಯಾರು ಎಂದರೆ ಮಹಾರಾಜರು ಎಂದು ಹೇಳಿಕೊಳ್ಳಬೇಕು. ಹಿಂದಿನ ನಾಯಕರ ಮಾಡದಿರುವ ಕೆಲಸ ವನ್ನು ರಾಜರು ಮಾಡುತ್ತಾರೆ ಎಂದರು.