ಬಳ್ಳಾರಿ : ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸಿಕ್ಕಿಬಿದ್ದಾಗಿನಿಂದ ಒಂದಲ್ಲ ಒಂದು ಗ್ರಹಚಾರಗಳು ಮೆಟ್ಟಿಕೊಳ್ತಾನೇ ಇವೆ.. ಬಳ್ಳಾರಿ ಜೈಲಿನಲ್ಲಿರೋ ದರ್ಶನ್ಗೆ ಈಗ ಮತ್ತೊಂದು ಡ್ರಿಲ್ ಶುರುವಾಗಿದೆ..ರೇಣುಕಾಸ್ವಮಿ ಕೊಲೆ ಕೇಸ್ ನಲ್ಲಿ ಐಟಿ ಅಧಿಕಾರಿಗಳು ಫೀಲ್ಡಿಗಿಳಿದ್ದಿದ್ದಾರೆ.. ಅರೆ ಕೊಲೆ ಕೇಸಲ್ಲಿ ಐ ಟಿ ಯವರಿಗೆ ಏನೆ ಕೆಲಸ ಅಂತೀರಾ ಅದಕ್ಕೂ ಒಂದು ಕಾರಣ ಇದೆ.. ಇದರ ಜೊತೆ ಕೇಸಲ್ಲಿ ಮೂವ್ವರಿಗೆ ಜಾಮೀನು ಸಿಕ್ಕಿದ್ರು ಬಿಡುಗಡೆಯಾಗ್ತಿಲ್ಲ.. ಕುರಿತ ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ..
ನಟ ದರ್ಶನ್ ಗೆ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಒಂದಾದ ಮೇಲೊಂದು ಸಮಸ್ಯೆಗಳು ಬಿಟ್ಟು ಬಿಡದೆ ಕಾಡ್ತಿವೆ.ಎಲ್ಲಾ ಮುಗೀತೂ ಚಾರ್ಜ್ ಶೀಟ್ ಕೂಡ ಆಯ್ತು ಜಾಮೀನಿಗೆ ಅರ್ಜಿ ಹಾಕಿ ಆಯ್ತು ಇನ್ನೇನು ಬೇಲ್ ಸಿಕ್ರೆ ಹೊರಗೆ ಬರೋದ್ ಅಷ್ಟೇ ಇನ್ಯಾವ ವಿಚಾರಣೆಯ ಟೆನ್ಷನ್ ಇಲ್ಲ ಅಂದುಕೊಂಡಿದ್ದ ಕಾಟೇರನಿಗೆ ಈಗ ಐಟಿ ಶಾಕ್ ಕೊಟ್ಟಿದೆ.
ಇಂದು ಬೆಳಗ್ಗೆ ಬಳ್ಳಾರಿ ಜೈಲಿಗೆ ಎಂಟ್ರಿ ಕೊಟ್ಟಿರೋ ಐಟಿ ಅಧಿಕಾರಿಗಳು ದರ್ಶನ್ಗೆ ಡ್ರಿಲ್ ಶುರು ಮಾಡಿದ್ರು.. ರೇಣುಕಾಸ್ವಾಮಿ ಕೊಲೆಯಲ್ಲಿ ಬಳಕೆಯಾಗಿದ್ದ ಹಣದ ಮೂಲದ ಬಗ್ಗೆ ದರ್ಶನ್ ನನ್ನ ಬಳ್ಳಾರಿ ಜೈಲಲ್ಲೇ ಎರಡು ದಿನ ವಿಚಾರಣೆ ಮಾಡಲು ಬೆಂಗಳೂರಿನ 57 ನೇ ಸೆಷನ್ಸ್ ಕೋರ್ಟ್ ನಿಂದ ಅನುಮತಿ ಪಡೆದುಕೊಂಡಿದ್ರು. ಇಂದು ಬಳ್ಳಾರಿ ಜೈಲಿಗೆ ಎಂಟ್ರಿ ಕೊಟ್ಟ ಟಿ ಅಧಿಕಾರಿಗಳನ್ನು ನೋಡಲು ದರ್ಶನ್ ನಸು ನಗುತ್ತಲೇ ಬಂದಿದ್ರು. ದರ್ಶನ್ ವಿಚಾರಣೆ ಮಾಡಿದ ಐಟಿ ಅಧಿಕಾರಗಳು ರೇಣುಕಾಸ್ವಾಮಿ ಕೊಲೆ ಪ್ರಕರಣ ಮುಚ್ಚಿ ಹಾಕಲು ಬಳಸಿದ ಹಣ, ದರ್ಶನ್ರ ಮನೆ ಮಹಜರಿನ ವೇಳೆ ಸಿಕ್ಕ ನಗದು ಹಣದ ಮೂಲದ ಬಗ್ಗೆ ವಿಚಾರಣೆ ಮಾಡಿದ್ದಾರೆ.
84 ಲಕ್ಷ ರೂಪಾಯಿ ಹಣ ಕೊಟ್ಟವರು ಯಾರು? ಮನೆಯಲ್ಲಿ ಸಿಕ್ಕ ಹಣ ದಾಖಲೆ ಯಾವುದು? ಎಂಬ ಬಗ್ಗೆ ದರ್ಶನ್ ನನ್ನು ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ… ಇನ್ನು ಐಟಿ ಅಧಿಕಾರಿಗಳು ದರ್ಶನ್ ನನ್ನು ನಾಳೆಯೂ ಮತ್ತಷ್ಟು ಡ್ರಿಲ್ ಮಾಡಲಿದ್ದಾರೆ ಎನ್ನಲಾಗಿದೆ.. ಇನ್ನು ದರ್ಶನ್ ಹೇಳಿಕೆಯಂತೆ ಹಣ ಕೊಟ್ಟಿರುವ ಮೋಹನ್ ರಾಜ್ ಹಾಗೂ ಡೆವಿಲ್ ನಿರ್ದೇಶಕ ಸೇರಿದಂತೆ ಕೆಲ ನಿರ್ಮಾಪಕರ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಅಲ್ಲದೇ ಆರ್ ಆರ್ ನಗರದ ಮನೆಯಲ್ಲೂ ಐಟಿ ಅಧಿಕಾರಿಗಳು ಪರಿಶೀಲನೆ ಸಾಧ್ಯತೆ ಇದೆ.
ನಮ್ಮ ಬಾಸ್ ಎಲ್ಲಾ ನೋಡ್ಕೊತಾರೆ ಎಂದು ಕೇಸ್ ನಲ್ಲಿ ಫಿಟ್ ಆಗಿದ್ದವರಿಗೆ ಗ ಶ್ಯೂರಿಟಿ ಕೊಡೋಕೆ ಯಾರೋ ಮುಂದೆ ಬರ್ತಿಲ್ಲವಂತೆ. ಹೌದು. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಫಿಟ್ ಆಗಲು ಮುಂದೆ ಬಂದು ರೇಣುಕಾಸ್ವಾಮಿ ಶವವನ್ನು ವಿಲೇವಾರಿ ಮಾಡಿ ಕೊಲೆ ನಾವೇ ಮಾಡಿದ್ದು ಎಂದು ಸರೆಂಡರೆ ಆಗಿದ್ದ ನಿಖಿಲ್ , ಕಾರ್ತಿಕ್, ಹಾಗು ಕೇಶವಮೂರ್ತಿ ಕೋರ್ಟ್ ಜಾಮೀನು ಮಂಜೂರು ಮಾಡಿ 3 ದಿನ ಆದ್ರೂ ಶ್ಯೂರಟಿ ಕೊಡಲು ಯಾರೋ ಮುಂದೆ ಬರದ ಕಾರಣ ಆರೋಪಿಗಳು ಇನ್ನು ಜೈಲಿನಲ್ಲೇ ಇರುವಂತಾಗಿದೆ..ಕೋರ್ಟ್ ಮೂರೋ ಆರೋಪಿಗಳಿಗೆ ಕಳೆದ ಮೂರು ದಿನಗಳ ಹಿಂದೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು.. ಆದರೆ ಇದುವರೆಗೂ ಬಾಂಡ್ ಶ್ಯೂರಿಟಿ ಸೇರಿದಂತೆ ಇನ್ನಿತರ ಕೆಲವು ಕಾನೂನು ಪ್ರಕ್ರಿಯೆಗಳು ಮುಗಿದಿಲ್ಲ ಎನ್ನಲಾಗಿದೆ. ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಜಾಮೀನು ಪ್ರತಿ ಕೋರ್ಟ್ನಿಂದ ಜೈಲಾಧಿಕಾರಿಗೆ ತಲುಪಿದ ಕೋಡಲೇ ಆರೋಪಿಗಳನ್ನು ಬಿಡುಗಡೆ ಮಾಡುವ ಸಾದ್ಯತೆ ಇದೆ.
ಒಟ್ಟಿನಲ್ಲಿ ನಮ್ಮ ಬಾಸ್ ಗಾಗಿ ಎಲ್ಲಾ ಮಾಡ್ತೀವಿ ಅಂತ ಕೇಸ್ ಮೈಮೇಲೆ ಹಾಕಿಕೊಂಡವರಿಗೆ ಶ್ಯೂರಿಟಿ ಕೊಡೋಕ್ಕೋ ಸಾಧ್ಯವಾಗದ ಪರಿಸ್ಥಿತಿ ಬಂದಿದೆ, ಇದರಿಂದ ಆರೋಪಿಗಳಿಗೆ ಬಣ್ಣದ ಜನರ ಸತ್ಯ ಅರ್ಥವಾಗಬೇಕಿದೆ.. ಇನ್ನು ದರ್ಶನ್ ಗೆ ಐಟಿ ಡ್ರಿಲ್ ನಲ್ಲಿ ಮತ್ತ್ಯಾವ ಕಂಟಕ ಕಾದಿದ್ಯೋ ಕಾದುನೋಡಬೇಕಿದೆ..