ಫ್ಲೋರಿಡಾ: ಪ್ರಸಕ್ತ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಲೀಗ್ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು, ಅಗ್ರಸ್ಥಾನದೊಂದಿಗೆ ಸೂಪರ್-8 ಸುತ್ತಿಗೆ ಪದಾರ್ಪಣೆ ಮಾಡಿದೆ. ಮುಂದಿನ ಪಂದ್ಯಕ್ಕಾಗಿ ವೆಸ್ಟ್ ಇಂಡೀಸ್ಗೆ ಪ್ರಯಾಣಿಸಲಿದೆ. ಲೀಗ್ ಸುತ್ತಿನ ಪಂದ್ಯಗಳ ಮುಕ್ತಾಯದ ಹಿನ್ನೆಲೆ ಭಾರತ ತಂಡಕ್ಕೆ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದ ಶುಭಮನ್ ಗಿಲ್ ಹಾಗೂ ಅವೇಶ್ ಖಾನ್ ಭಾರತಕ್ಕೆ ಮರಳಲು ಸಿದ್ಧವಾಗಿದ್ದಾರೆ.
ಶುಭಮನ್ ಗಿಲ್ ಅವರು ಭಾರತಕ್ಕೆ ಮತ್ತೆ ಮರಳುತ್ತಿರುವುದಕ್ಕೆ ಅವರ ಅಶಿಸ್ತಿನ ವರ್ತನೆಯೇ ಕಾರಣ ಎಂಬ ವದಂತಿಗಳು ಜಾಲತಾಣದಲ್ಲಿ ಹುಟ್ಟಿಕೊಂಡಿದ್ದು ಇದಕ್ಕೆ ಬ್ಯಾಟಿಂಗ್ ಕೋಚ್ ರಾಥೋರ್ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ರಾಥೋಡ್, ಸೂಪರ್-8 ಪಂದ್ಯಗಳಗಾಗಿ ಟೀಂ ಇಂಡಿಯಾದ ಮೀಸಲು ಆಟಗಾರರಾಗಿ ರಿಂಕು ಸಿಂಗ್,
![Demo](https://ainlivenews.com/wp-content/uploads/2023/12/spoorthi-1.jpg)
ನಿಮಗೆ ಮೃದುವಾದ ಚಪಾತಿ ಬೇಕೇ? ಈ ಟಿಪ್ಸ್ ಫಾಲೋ ಮಾಡಿ – ಬೆಣ್ಣೆಯಂತ ಚಪಾತಿ ರೆಡಿ.!
ಖಲೀಲ್ ಅಹ್ಮದ್ ಮಾತ್ರ ಕೆರಿಬಿಯನ್ ನಾಡಿಗೆ ಪ್ರಯಾಣಿಸಲಿದ್ದಾರೆ. ಅವೇಶ್ ಖಾನ್ ಮತ್ತು ಶುಭಮನ್ ಗಿಲ್ ಅವರನ್ನು ಮರಳಿ ಭಾರತಕ್ಕೆ ಮರಳಿ ಕಳುಹಿಸುತ್ತಿರುವುದು ಅಶಿಸ್ತಿನ ವರ್ತನೆಯಿಂದಲ್ಲ, ಇದು ಪೂರ್ವನಿಯೋಜಿತ ಕ್ರಮ. ಕೆರಿಬಿಯನ್ನಲ್ಲಿ ಕೇವಲ ಇಬ್ಬರು ಮೀಸಲು ಆಟಗಾರರ ಸೇರ್ಪಡೆಗೆ ಮಾತ್ರ ಅವಕಾಶವಿದೆ.
ಇದನ್ನು ಮೊದಲೇ ನಿರ್ಣಯಿಸಲಾಗಿತ್ತು ಎಂದು ತಿಳಿಸಿದ್ದಾರೆ. ಇನ್ನೂ ಗಿಲ್ ಅವರನ್ನು ತವರಿಗೆ ವಾಪಸ್ ಕಳುಹಿಸುತ್ತಿರುವ ಬಗ್ಗೆ ವರದಿಗಳು ಹೊರಬೀಳುತ್ತಿದ್ದಂತೆ ಇನ್ಸ್ಟಾಗ್ರಾಮ್ನಲ್ಲಿ ರೋಹಿತ್ ಶರ್ಮಾ ಅವರನ್ನು ಗಿಲ್ ಅನ್ಫಾಲೋ ಮಾಡಿದ್ದಾರೆ ಎಂಬುದು ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)