ತುಮಕೂರು: ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮಗ ಗೃಹಬಂಧನದಲ್ಲಿಟ್ಟಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ 11 ತಿಂಗಳಿನಿಂದ ಮಗ ಸೊಸೆ ಸೇರಿ ಹೆತ್ತ ತಾಯಿಯೇ ಬಂದನದಲ್ಲಿಟ್ಟಿದ್ದ ತುಮಕೂರಿನ ಶಿರಾಗೇಟ್ ಬಳಿಯ ಸಾಡೇಪುರದಲ್ಲಿ ಘಟನೆ ನಡೆದಿದೆ.
ರಾಮ ಕಾಲ್ಪನಿಕ ಎಂದು ಕರೆದವರು ಈಗ ಜೈ ಸಿಯಾ ರಾಮ್ ಘೋಷಣೆ ಕೂಗುತ್ತಿದ್ದಾರೆ: ಮೋದಿ ಕಿಡಿ!
ಪಂಕಜಾಕ್ಷಿ (80) ಸಂತೃಸ್ಥೆ ತಾಯಿ. ನಿವೃತ್ತ ಸಿಡಿಪಿಓ ಆಗಿರುವ ಪಂಕಜಾಕ್ಷೀಗೆ 12 ಮನೆಗಳು ಸೇರಿದಂತೆ ಒಟ್ಟು ಆಸ್ತಿಗೆ ಇವಳೇ ಯಾಜಮಾನಿಯಾಗಿದ್ದಳು.ಈಕೆಗೆ ನಾಲ್ವರು ಮಕ್ಕಳು. ಎಲ್ಲಾ ಆಸ್ತಿಯನ್ನು ತನ್ನ ಮಗಳಿಗೆ ಬರೆಯುತ್ತಲೇ ಎಂದು ತಿಳಿದ ಮಗ ಜೇಮ್ ಸುರೇಶ್ ಹಾಗೂ ಸೊಸೆ ಆಶಾ ಹೆತ್ತ ತಾಯಿಯನ್ನು ಕೆಳದ 11 ತಿಂಗಳಿದ ಮನೆಯಲ್ಲೆ ಬೀಗ ಜಡಿದು ದಿಗ್ಬಂದನ ಮಾಡಿದ್ದರು.
ವೃದ್ದೆಗೆ 50 ಸಾವಿರ ಪೇನ್ಸನ್ ಕೂಡ ಬರುತ್ತಿದ್ದು ಈ ಹಣ ಕೂಡ ತಗೆದುಕೊಳ್ಳುತ್ತಿದ್ದರು.ಈಗಾಗಲೇ ವೃದ್ದೆಯ ಬಳಿ ಇದ್ದ ಒಡವೆಗಳನ್ನು ಪಡೆದುಕೊಂಡು ಕಿರುಕುಳ ನೀಡುತ್ತಿದ್ದರು. ಈ ವಿಷಯವನ್ನು ತಿಳಿದ ಸ್ಥಳೀಯರು ಸಾಂತ್ವನ ಕೇಂದ್ರ, ಸಖಿ ಕೇಂದ್ರ ಹಾಗೂ ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಿದ್ದರು.
ಮನೆಗೆ ತುಮಕೂರು ನಗರ ಪೊಲೀಸರು ಹಾಗೂ ಸಾಂತ್ವಾನ ಕೇಂದ್ರ ಅಧಿಕಾರಿಗಳು ಭೇಟಿ ವೃದ್ದಿಯನ್ನು ರಕ್ಷಸಿ ಸಾಂತ್ವಾನ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಆರೈಕೆ ಮಾಡಿದ್ದಾರೆ.