ಹುಬ್ಬಳ್ಳಿಯ ಹಳೆ ಕೋರ್ಟ್ ವೃತ್ತದ ಹತ್ತಿರ ಪ್ಲೈಓವರ್ ಕಾಮಗಾರಿಯ ವೇಳೆ ಕಬ್ಬಿಣ ರಾಡ್ ಬಿದ್ದು ಗಾಯಗೊಂಡ ಪೊಲೀಸ್ ಅಧಿಕಾರಿಯನ್ನು ಇಂದು ಕೆ.ಎಮ್.ಸಿ ಆರ್.ಐಗೆ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ ಶಾಸಕರು, ಸ್ಲಮ್ ಬೋರ್ಡ್ ಅಧ್ಯಕ್ಷರಾದ ಪ್ರಸಾದ ಅಬ್ಬಯ್ಯ ಅವರು ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ವೈದ್ಯರು ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಬೇಕು. ಅಗತ್ಯ ಬಿದ್ದರೆ, ಹೆಚ್ಚಿನ ತಜ್ಞ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲು ಕ್ರಮ ವಹಸಿಸಲು ಸೂಚನೆ ನೀಡದರು. ಇನ್ನು ಸುರಕ್ಷ ಕ್ರಮ ವಹಿಸದೇ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಕಂಪನಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು.
ಈ ಮನೆಮದ್ದು ಬಳಸಿದ್ರೆ ಆಮೇಲೆ ಮನೆಯಲ್ಲಿ, ಒಂದೂ ಹಲ್ಲಿಗಳು ಇರಲ್ಲ ನೋಡಿ!
ಸಾರ್ವಜನಿಕ ಜೀವದ ಜೊತೆ ಆಟವಾಡುವ ಇಂಥ ಗುತ್ತಿಗೆ ಕಂಪನಿಗಳನ್ನು ಕಪ್ಪ ಪಟ್ಟಿಗೆ ಸೇರಿಸಲು ಶಿಫಾರಸು ಮಾಡುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಹೇಳಿದರು. ಈ ಸಂದರ್ಭದಲ್ಲಿ ಕಿಮ್ಸ್ ವೈದ್ಯಾಧಿಕಾರಿಗಳು, ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಇದ್ದರು.