ಬೆಂಗಳೂರು:- ಅವ್ರು ಇಬ್ಬರು ಬೆಳಿಗ್ಗೆ ಬೆಳಿಗ್ಗೆ ಬೈಕ್ ನಲ್ಲಿ ಹೋಗ್ತಾ ಇದ್ರು..ಆದ್ರೆ ಹಿಂಬದಿಯಿಂದ ಬಂದ ಕ್ಯಾಂಟರ್ ವೊಂದು ಬಂದಿದೆ..ನೋಡ ನೋಡ್ತಿದ್ದಂತೆ ಬೈಕ್ ಮೇಲೆ ಹರಿದಿದೆ ಇಬ್ಬರು ಟೈರ್ ಅಡಿಯಲ್ಲಿ ಸಿಲುಕಿ ಅಪ್ಪಚ್ಚಯಾಗಿ ಹೋಗಿದ್ರು..ಭಯಾನಕ ದೃಶ್ಯ ಕಂಡ ಏರಿಯಾ ಜನ ಬೆಚ್ಚಿ ಬಿದ್ದಿದ್ರು.
Crime News: ನಿನ್ನೆ ರಾತ್ರಿ ಪತ್ನಿ ಕೊಲೆ, ಇಂದು ನೇಣಿಗೆ ಶರಣಾದ ಗಂಡ!
ಇದು ಸ್ಯಾಟಲೈಟ್ ಸಮೀಪದ ಹೊಸಗುಡ್ಡದಹಳ್ಳಿ ಏರಿಯಾ..ಬೆಳಗ್ಗೆ 8.28 ರ ಸಮಯ..ಬೈಕ್ ನಲ್ಲಿ ಬನಾರಸ್ ಮೂಲದ 21 ವರ್ಷದ ಶಾಹಿಬ್ ರಾಝಾ ಮತ್ತು 6 ನೇ ತರಗತಿ ವಿದ್ಯಾರ್ಥಿ 14 ವರ್ಷದ ರೆಹಾನ್ ರಾಝಾ ಎಂಬ ಬಾಲಕ ಇಬ್ರು ಬರ್ತಾ ಇದ್ರು..ಈ ವೇಳೆ ಹಾಲೋಬ್ಲಾಕ್ ತುಂಬಿದ್ದ ಕ್ಯಾಂಟರ್ ವೊಂದು ಏಕಾ ಏಕಿ ಡೌನ್ ನಲ್ಲಿ ಬಂದಿದೆ…ಹೀಗೆ ಬಂದ ಕ್ಯಾಂಟರ್ ಬೈಕ್ ಗೆ ಗುದ್ದಿದೆ..ಈ ವೇಳೆ ಇಬ್ಬರು ಬೈಕ್ ನಿಂದ ಕೆಳಗೆ ಬಿದ್ದಿದ್ದು..ಇಬ್ಬರು ಟೈರ್ ಅಡಿಯಲ್ಲಿ ಸಿಲುಕಿದ್ರೆ ಸುಮಾರು 150 ರಿಂದ 200 ಮೀಟರ್ ಇಬ್ಬರನ್ನು ಕ್ಯಾಂಟರ್ ಎಳೆದೊಯ್ದಿದೆ.
ಇಬ್ಬರು ಹಿಂಬದಿ ಟೈರ್ ಗೆ ಸಿಲುಕಿ ಮೃತಪಟ್ಟಿದ್ದು ಮಾಂಸದ ಮುದ್ದೆ ಆಗಿದ್ರು..ಅಷ್ಟೇ ಅಲ್ಲಾ ರಸ್ತೆ ಬದಿ ನಿಲ್ಲಿಸಿದ್ದ 7 ಬೈಕ್ ಹಾಗೂ 2 ಕಾರು ಘಟನೆಯಲ್ಲಿ ಜಖಂ ಆಗಿದೆ..ಬೈಕ್ ಮುಂಬದಿಗೆ ಸಿಲಿಕಿರಲಿಲ್ಲ ಅಂದಿದ್ರೆ ಕ್ಯಾಂಟರ್ ಮತ್ತಷ್ಟು ಮುಂದಕ್ಕೆ ಹೋಗಿ ಭಾರೀ ಅನಾಹುತವೇ ನಡೆದುಹೋಗ್ತಿತ್ತು..
ಇನ್ನೂ ಘಟನೆ ಕಾರಣ ಏನಂದ್ರೆ ಇದೇ ರಸ್ತೆಯಲ್ಲಿ ಮನೆಯೊಂದರ ಕಾಮಗಾರಿ ನಡೀತಿತ್ತು..ಅದಕ್ಕೆ ಬೇಕಾಗುವ ಹಾಲೋಬ್ಲಾಕ್ ಅನ್ನ ಇದೇ ಕ್ಯಾಂಟರ್ ನಲ್ಲಿ ತರಿಸಲಾಗಿತ್ತು…ಅದನ್ನ ಇಳಿಸುವ ವೇಳೆ ಡ್ರೈವರ್ ಸುರೇಶ್ ಕ್ಯಾಂಟರ್ ನಿಂದ ಕೆಳಗೆ ಇಳಿದಿದ್ದು ಹ್ಯಾಂಡ್ ಬ್ರೇಕ್ ಹಾಕೋದನ್ನ ಮರೆತಿದ್ದಾನೆ..ಹೇಳಿ ಕೇಳಿ ಇಳಿಜಾರು ಇದ್ದಿದ್ರಿಂದ ಕ್ಯಾಂಟರ್ ಮೂವ್ ಆಗಿದ್ದು ಎರಡು ಬಲಿ ಪಡೆದಿದೆ.
ಘಟನೆ ಆಗ್ತಿದ್ದಂತೆ ಚಾಲಕ ಎಸ್ಕೇಪ್ ಆಗಿದ್ದು ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ..ಮೃತ ಶಾಹಿಬ್ ರಾಝಾ ಸೀರೆ ನೇಯುವ ಕೆಲಸ ಮಾಡ್ತಿದ್ದ ಅನ್ನೋದು ಗೊತ್ತಾಗಿದ್ದು..ಇದೇ ರಸ್ತೆಯ ಕೊನೆಯಲ್ಲಿ ಆತನ ಮನೆ ಇತ್ತು ಎನ್ನಲಾಗಿದ್ದು..ಬೆಳಗ್ಗೆ ಅಂಗಡಿಗೆ ತರಲು ಹೋದಾಗ ಅವಘಡ ನಡೆದಿದೆ.
ಘಟನೆ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ತನಿಖೆ ನಡೆಸುತ್ತಿದ್ದಾರೆ. ಒಂದು ಕ್ಷಣ ಯೋಚಿಸಿ ಹ್ಯಾಂಡ್ ಬ್ರೇಕ್ ಹಾಕಿದ್ರೆ ಈ ದುರ್ಘಟನೆ ನಡೆಯುತ್ತಿರಲಿಲ್ಲ..