ಬಾಗಲಕೋಟೆ:- ರಬಕವಿ ಬನಹಟ್ಟಿ ಸುಮಾರು ವರ್ಷಗಳ ಹಿಂದೆ ನೇಕಾರ ಮತ್ತು ಕನ್ನಡ ಭವನ ಕಟ್ಟಡಕ್ಕೆ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆದಿತ್ತು ಆದರೆ ಇಂದಿಗೂ ಹಸ್ತಾಂತರ ಮಾಡದೇ ಇರುವುದು ಮತ್ತು ಅದರಲ್ಲಿ ಅವ್ಯವಹಾರ ಆರೋಪಕ್ಕೆ ಪರೀಕ್ಷೆ ಮಾಡಿ ತಪ್ಪಿಸ್ಥರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವ ಆರ್ ಬಿ ತಿಮ್ಮಾಪುರ ಆದೇಶ ನೀಡಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಗರಸಭಾ ಸಭಾಭವನದಲ್ಲಿ ತಾಲೂಕ ಮಟ್ಟದ ಪ್ರಗತಿ ಪರಿಶೀಲನ ಸಭೆ ನಡೆಯಿತು.
ಪ್ರವಾಹ ಸ್ಥಳಗಳಿಗೆ ಪ್ರತಿನಿತ್ಯ ಭೇಟಿ ನೀಡಿ ಅಲ್ಲಿರುವ ಜನರಿಗೆ ವೈದ್ಯಕೀಯ ತಪಾಸಣೆ ಮಾಡಬೇಕೆಂದರು.ಈ ವೇಳೆ ಸರ್ಕಾರಿ ವೈದ್ಯ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಸಚಿವರ ಕೇಳಿದ ಪ್ರಶ್ನೆಗೆ ವೈದ್ಯಧಿಕಾರಿಗಳು ಕಕ್ಕಾಬಿಕ್ಕಿಯಾದರು. ಎಚ್ ಐ ವಿ ರೋಗಕ್ಕೆ ಒಳಗಾದ ರೋಗಿಗಳಿಂದ ಜನ್ಮ ತಾಳಿದ ಮಕ್ಕಳನ್ನು ಪೋಷಣೆ ಮಾಡುವುದು ನಿಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ರಬಕವಿ ಬನಹಟ್ಟಿ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಿಂತ ಹೆಚ್ಚಿನ ಗುಣಮಟ್ಟವನ್ನು ಹೊಂದಬೇಕು. 97 ಸರ್ಕಾರಿ ಶಾಲೆ ಅವಶೇಷಣದಲ್ಲಿರುವ ಕಟ್ಟಡಗಳನ್ನು ಶೀಘ್ರದಲ್ಲಿ ಪುನರ್ ಚೇತನ ಮಾಡಿ ಸುರಕ್ಷಿತ ಕಟ್ಟಡ ನಿರ್ಮಿಸಬೇಕೆಂದು ಹೇಳಿದರು.
ಸಚಿವ ಆರ್ ಬಿ ತಿಮ್ಮಾಪುರ ಮಾತನಾಡಿ:- ಪ್ರಗತಿ ಪರಿಶೀಲನ ಸಭೆ ಎಂದರೆ ತಾಲೂಕ ಅಧಿಕಾರಿಗಳು ತಾಲೂಕಿನಲ್ಲಿ ಇರುವ ಸಾರ್ವಜನಿಕರ ಹಿತಾಸಕ್ತಿ ಮತ್ತು ಅವರ ಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿಯಾಗಿರುತ್ತದೆ.
ಕರ್ತವ್ಯ ಲೋಪ ಮಾಡದೆ ಜನರಿಗೆ ಸರ್ಕಾರದಿಂದ ಸಿಗುವಂತಹ ಯೋಜನೆಗಳನ್ನು ಅವರ ಮನೆಯ ಬಾಗಿಲಿಗೆ ತಲುಪಿಸಬೇಕೆಂದು ಸಚಿವ ಆರ್ ಬಿ ತಿಮ್ಮಾಪುರ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿ ಶ್ರೀಮತಿ ಕೆ ಜಾನಕಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರ್ನಾಥ್ ರೆಡ್ಡಿ. ವಿಧಾನ ಪರಿಷತ್ ಸದಸ್ಯ ಶ್ರೀಮತಿ ಉಮಾಶ್ರೀ. ತೇರದಾಳ ಶಾಸಕ ಸಿದ್ದು ಸವದಿ. ಜಮಖಂಡಿ ಡಿ ವೈ ಎಸ್ ಪಿ ಶಾಂತವೀರ. ಜಮಖಂಡಿ ಉಪ ವಿಭಾಗ ಅಧಿಕಾರಿ ಶ್ವೇತಾ ಬಿಡಿಕಾರ. ಸೇರಿದಂತೆ ತಾಲೂಕಿನ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ