ತುಮಕೂರು:- 2024 ರ ಲೋಕಸಭಾ ಚುನಾವಣಾ ಹಿನ್ನೆಲೆ ತುಮಕೂರು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಮುಂದಾಗಿದ್ದಾರೆ.
Breaking: ಬಟ್ಟೆ ತೊಳೆಯಲು ಹೋಗಿ ನೀರು ಪಾಲಾದ ತಾಯಿ ಹಾಗೂ ಇಬ್ಬರು ಮಕ್ಕಳು!
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ 16 ಮಂದಿ ಜಿಲ್ಲೆಯಿಂದ ಗಡಿಪಾರು ಮಾಡಿ ತುಮಕೂರು ಎಸ್ ಪಿ ಅಶೋಕ್ ಕೆ.ವಿ ಯಿಂದ ಆದೇಶ ಹೊರಡಿಸಿದ್ದಾರೆ. ತಿಪಟೂರು ನಗರ ಠಾಣಾ ವ್ಯಾಪ್ತಿಯ ಸಲ್ಮಾನ್ ಖಾನ್ @ ಸಲೇಮಾನ್, ಚೇತನ್ ಬಿ.ಆರ್, ತಿಪಟೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಶಶಿಧರ್, ತುರುವೇಕೆರೆ ಠಾಣಾ ವ್ಯಾಪ್ತಿಯ ನಾಗರಾಜ್ @ ರಾಕಿ, ಮಂಜುನಾಥ್ @ ಲಾಳಿ ಮಂಜ, ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯ
ಹರೀಶ್ @ ಖಡಕ್ ಹರೀಶ್, ಬಸವರಾಜು, ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಆಕಾಶ್, ಶ್ರೀನಿವಾಸ್@ ಸೀನ, ಸಿಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಯಧುನಂದನ, ಗುಬ್ಬಿ ಠಾಣಾ ವ್ಯಾಪ್ತಿಯ ಫರ್ಮಾನ್ ಖಾನ್@ ಇರ್ಫಾನ್ ಖಾನ್, ತಿಲಕ್ ಪಾರ್ಕ್ ಠಾಣಾ ವ್ಯಾಪ್ತಿಯ ಅಲಿಹುಸೇನ್@ಅಲಿ, ಜಯನಗರ ಠಾಣಾ ವ್ಯಾಪ್ತಿಯ ಸಂಪತ್ ಕುಮಾರ್@ ಸಂಪತ್, ಕೋರ ಪೊಲೀಸ್ ಠಾಣಾ ವ್ಯಾಪ್ತಿಯ ಕಿರಣ್@ ಜಡೇ, ಹೊಸಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯ ರವಿಕುಮಾರ@ರೇಪ್ ರವಿ, ವೈ.ಎನ್ ಹೊಸಕೋಟೆ ಠಾಣಾ ವ್ಯಾಪ್ತಿಯ ವಿರೇಶ್ ಇವರುಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.