ಬೀದರ್’:– ತನಿಖಾ ಸಂಸ್ಥೆಗಳನ್ನು ಮೋದಿ, ಅಮಿತ್ ಶಾ ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಎಲ್ಲಾ ನಾಯಕರಿಗೆ ಇಡಿ, ಐಟಿ ಹಾಗೂ ಮೋದಿ ಭಯವಿದೆ. ಕಾಂಗ್ರೆಸ್ನಿಂದ ಲಾಭ ತೆಗೆದುಕೊಂಡ ಯಾರ ಬಳಿಯೂ ಧೈರ್ಯವಿಲ್ಲದೇ ಬಿಜೆಪಿಗೆ ಹೋಗುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಸಹಕಾರ ಕೊಡದೇ ಇದ್ದರೆ ಪ್ರಜಾಪ್ರಭುತ್ವ, ಸಂವಿಧಾನ ಉಳಿಯುವುದಿಲ್ಲ. ಈ ಸಂವಿಧಾನವನ್ನು ಮೋದಿ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ಉಳಿಯಬೇಕು ಎಂದರೆ ಕಾಂಗ್ರೆಸ್ಗೆ ಸಹಕಾರ ನೀಡಲೇಬೇಕು ಎಂದಿದ್ದಾರೆ.
ಎಲ್ಲರಿಗೂ ಉಚಿತವಾಗಿ ನಾವು ಪಡಿತರ ಅಕ್ಕಿಯನ್ನು ಕೊಡುತ್ತಿದ್ದೇವೆ. ನೆಹರೂ ಅವರು ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಸ್ಥಾಪನೆ ಮಾಡಿದ್ದರು. ಮೋದಿ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಸುಳ್ಳು ಹೇಳಿದ್ದಾರೆ. ರಾಮಮಂದಿರದಲ್ಲಿ ರಾಜಕೀಯ ಏಕೆ ಬಂತು? ಮೋದಿ ಜನ, ಧರ್ಮ, ಜಾತಿಯನ್ನ ಬೇರೆ ಬೇರೆ ಮಾಡಲು ನೋಡುತ್ತಾರೆ. ಈ ಬಾರಿ ಮೋದಿಯವರನ್ನು ಅಧಿಕಾರದಿಂದ ಹೊರಗೆ ಕಳಿಸಿ, ಮುಂದಿನ ಪೀಳಿಗೆಯನ್ನು ರಕ್ಷಣೆ ಮಾಡಬೇಕಿದೆ. ಎಲ್ಲಾ ಬಡವರಿಗೆ ಹೋಗುತ್ತವೆ ಎಂದು ಮೋದಿ ಎಲ್ಲಾ ನೇಮಕಾತಿಗಳನ್ನು ಬಂದ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.