ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲಿನಿಂದ ಇನ್ನೇನು ಎರಡು ತಿಂಗಳಲ್ಲಿ ಬೇಲ್ ಮೇಲೆ ಬರ್ತಾನೆ ಅಂತ ಅವರ ಸೆಲೆಬ್ರಿಟಿಸ್ ಜೋಷ್ ಕಾಯ್ತಾ ಇದ್ದಾರೆ ಇನ್ನೊಂದು ಕಡೆ ಪತ್ನಿ ವಿಜಯಲಕ್ಷ್ಮಿ ಸಿಎಂ, ಡಿಸಿಎಂ ರನ್ನ ಭೇಟಿ ಮಾಡಿದ್ದಾರೆ.ಆದ್ರೇ ಪೋಲಿಸರ ಖಡಕ್ ತನಿಖೆಯ ಹಾದಿಯನ್ನ ನೋಡಿದ್ರೆ ದ ಗ್ಯಾಂಗ್ ಕ್ಲೈಮ್ಯಾಕ್ಸ್ ಬದಲಾಗೋ ಹಾಗೆ ಕಾಣ್ತಿದೆ. ಅದೇನೋ ಅಂತೀರಾ ಈ ಸ್ಟೋರಿ ನೋಡಿ..
ರೇಣುಕಾಸ್ವಾಮಿ ಕೊಲೆ ಪ್ರಕರಣ ದಲ್ಲಿ ಜೈಲು ಸೇರಿರುವ ಡಿ ಗ್ಯಾಂಗ್ ಗೆ ದಿನಕ್ಕೊಂದು ಸಂಕ್ಷಟ ಎದುರಾಗುತ್ತಿವೆ. ಹೆಂಡತಿ ವಿಜಯಲಕ್ಷ್ನೀ ಇನ್ನಿಲ್ಲದ ಕಾನೂನು ಪ್ರಯತ್ನ ಮಾಡ್ತಿದ್ರೆ ಇತ್ತ ಪೋಲಿಸರು ಮಾತ್ರ ಸ್ಟ್ರಾಂಗ್ ಹೆವಿಡೆನ್ಸ್ ಗಳನ್ನ ಕಲೆಕ್ಟ್ ಮಾಡಿದ್ದಾರೆ. ಪ್ರಮುಖ ಸಾಕ್ಷಿ ದಾರನಿಗೆ ಬೆದರಿಕೆ ಬೆನ್ನಲ್ಲೇ ಮತ್ತೆ ಪೋಲಿಸರು ಅ ಅಲರ್ಟ್ ಆಗಿದ್ದಾರೆ ಅದಕ್ಕೆ ಮತ್ತೆ 8 ಪ್ರಮುಖ ಸಾಕ್ಷ್ಯಾಧಾರರಿಂದ ಹೇಳಿಕೆ ದಾಖಲಿಸಿಕೊಂಡಿರುವ ತನಿಖಾಧಿಕಾರಿಗಳು..ಸ್ಪೆಟ್ಮೆಂಟ್ ಮಾಡಿಕೊಂಡು ನ್ಯಾಯಾಧೀಶರ ಮುಂದೆ 164 ರ ಅಡಿಯಲ್ಲಿ ಹೇಳಿಕೆ ದಾಖಲು ಮಾಡಲು ಸಿದ್ಧತೆ ನಡೆಸಿದ್ದಾರೆ. ಈ ಕೇಸ್ ಈಗಾಗಲೇ 12 ಜನ ಪ್ರಮುಖ ಸಾಕ್ಷ್ಯ ಗಳನ್ನು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿರುವ ಅಧಿಕಾರಿಗಳು. 18 ಜನರನ್ನು ಸಾಕ್ಷ್ಯ ಗಳನ್ನು 164 ಅಡಿಯಲ್ಲಿ ಹೇಳಿಕೆ ದಾಖಲು ಮಾಡಿದ್ದಾರೆ.
ಇನ್ನೂ ಈಡಿ ಗ್ಯಾಂಗ್ ಸಾಕ್ಷ್ಯ ಗಳಿಗೆ ಬೆದರಿಕೆ ಆರೋಪದ ಬೆನ್ನಲ್ಲೆ ಸಾಕ್ಷ್ಯ ಗಳ ರಕ್ಷಣೆ ಮತ್ತು ಅವ್ರಿಗೆ ಧೈರ್ಯ ತುಂಬುವ ಕೆಲಸಕ್ಕೆ ಮುಂದಾಗಿರುವ ಪೊಲೀಸರು..ಸುಮಾರು 180 ಜನರಿಂದ ಹೇಳಿಕೆ ದಾಖಲಿಸಿ ಸಾಕ್ಷ್ಯ ಗಳನ್ನಾಗಿ ಮಾಡಿ ಅದರಲ್ಲಿ ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯ ಗಳಾಗುವವರನ್ನು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲು ಮಾಡಿಸಿದ್ದು, ಇದೇ ಕಾರಣಕ್ಕೆ ಸಾಕ್ಷ್ಯದಾರರ ಹೆಸರು, ವಿಳಾಸ, ಗುರುತು ಸೇರಿದಂತೆ ಯಾವುದೇ ಮಾಹಿತಿ ನೀಡದೇ ಪೊಲೀಸರು ಅವರ ರಕ್ಷಣೆಗೆ ನಿಂತ್ತಿದ್ದಾರೆ..ನಿನ್ನೆ ಡಿ ಗ್ಯಾಂಗ್ ನ ಓರ್ವ ವ್ಯಕ್ತಿಯಿಂದ ಯಾವುದೇ ಸಾಕ್ಷ್ಯ ಹೇಳದಂತೆ ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಎನ್ ಸಿಆರ್ ದಾಖಲಿಸಿ ತನಿಖೆ ಕೈ ಗೊಂಡಿದ್ದಾರೆ.
ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ ಮಾಡಿಕೊಳ್ಳುತ್ತಿರುವ ಪೋಲಿಸರು ನಟ ದರ್ಶನ್ ಗೆ ಸಿಮ್ ಕಾರ್ಡ್ ಕೊಟ್ಟಿದ್ದ ವ್ಯಕ್ತಿಯನ್ನು ವಿಚಾರಣೆ ಮಾಡಿದ್ದಾರೆ.ಸಿಮ್ ಕಾರ್ಡ್ ಬಗ್ಗೆ ಪೋಲಿಸರಿಗೆ ಹಲವು ಅನುಮಾನಗಳು ಮೂಡಿವೆ.
ತನ್ನ ಹೆಸರಿನಲ್ಲಿ ನಟ ದರ್ಶನ್ ಸಿಮ್ ಖರೀದಿ ಮಾಡದೇ ಬೇರೆಯವರ ಹೆಸರಿನಲ್ಲಿ ಸಿಮ್ ಖರೀದಿ ಮಾಡಿದ್ದು ಯಾಕೆ..!?
ಯಾವ ಉದ್ದೇಶಕ್ಕೆ ಬೇರೆಯವರ ಹೆಸರಿನ ಸಿಮ್ ಕಾರ್ಡ್ ದರ್ಶನ್ ಬಳಕೆ ಮಾಡ್ತಿದ್ರು…?
ಸಿಮ್ ಕಾರ್ಡ್ ಖರೀದಿ ಮಾಡುವಾಗ ದರ್ಶನ್ , ಆ ವ್ಯಕ್ತಿಗೆ ಹೇಳಿದ್ದ ಕಾರಣವೇನು..?
ಖುದ್ದು ದರ್ಶನ್ ಸಿಮ್ ಖರೀದಿ ಮಾಡಲು ಹೇಳಿದ್ರಾ..?
ಸಿಮ್ ಖರೀದಿ ಮಾಡಲು ದರ್ಶನ್ ಹೇಳಿದ್ರ ಅಥವಾ ಬೇರೆಯವರು ಹೇಳಿದ್ರಾ..ಅನ್ನೊ ಹತ್ತು ಹಲವು ಆಂಗಲ್ ನಲ್ಲಿ ತನಿಖೆ ನಡೆಸಿದ್ದಾರೆ ಈಗಾಗಲೇ ಸಿಮ್ ಖರೀದಿ ಮಾಡಿರೋ ಸ್ನೇಹಿತರ 164 ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ ಒಟ್ಟಿನಲ್ಲಿ ರೇಣುಕಾಸ್ವಾಮಿಕೊಲೆ ಪ್ರಕರಣ ದಲ್ಲಿ ಪೋಲಿಸರು ಕಲೆ ಹಾಕಿರುವ ಸಾಕ್ಷಿಗಳು ,ಸಿಕ್ಕಿರುವ ಟೆಕ್ನಿಕಲ್ ಹೆವಿಡೆನ್ಸ್ ಗಳನ್ನ ನೋಡಿದ್ರೆ ಕನಿಷ್ಟ ಅಂದ್ರು ಮೂರು ವರ್ಷಗಳ ಕಾಲ ದರ್ಶನ್ ಗೆ ಪರಪ್ಪನ ಅಗ್ರಹಾರ ಎಂಬ ಖೈದಿಗಳ ಆಸ್ಥಾನ ವೇ ಗತಿ ಅನ್ಸುತ್ತೆ. ಅಷ್ಟರ ಮಟ್ಟಿಗೆ ಪೋಲಿಸರು ತನಿಖೆ ಮಾಡಿದ್ದಾರೆ..