ಶ್ರೀನಿವಾಸಪುರ: ರಾಯಲ್ಪಾಡು ಹೋಬಳಿ, ಗೌನಿಪಲ್ಲಿ ದೊಡ್ಡಪ್ರಮಾಣದ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಸಮಿತಿಯಿಂದ ಕಬ್ಬಿಣದ ತಗಡಿನ ಅಂಗಡಿ ಮಳಿಗೆಗಳ ಹಂಚಿಕೆ ವಿಚಾರದಲ್ಲಿ ಪರಿಶಿಷ್ಟ ಜಾತಿಯವರಿಗೆ ಅನ್ಯಾಯವಾಗಿದೆ ಎಂದು ವ್ಯಾಪಾರಿ ಆರ್.ವೆಂಕಟೇಶ್ ಅಧಿಕಾರಿಗಳ ವಿರುದ್ದ ಆರೋಪಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಟಿ ಯಲ್ಲಿ ಮಾತನಾಡಿದ ಅವ್ರು,
ನಾನು ಗೌನಿಪಲ್ಲಿ ಗ್ರಾಮದ ಮೂಲ ನಿವಾಸಿಯಾಗಿದ್ದು, ನಾನು ಸುಮಾರು ೨೫ ವರ್ಷಗಳಿಂದ ಪಾದಾಚಾರಿ(ಪುಟ್ಪಾತ್) ನಲ್ಲಿ ತೆಂಗಿನ ಗರಿಗಳನ್ನು ಹಾಕಿಕೊಂಡು ಹೂವಿನ ಅಂಗಡಿ ಇಟ್ಟಿಕೊಂಡು ಜೀವನ ಮಾಡುತ್ತಿದ್ದು, ಹೂವಿನ ಅಂಗಡಿಯಿಂದ ಜೀವನ ಸಾಗುಸುತ್ತಿದ್ದು, ೪ ತಿಂಗಳ ಹಿಂದೆ ಯಾರೋ ಕಿಡಿಗೇಡಿಗಳು ನನ್ನ ಅಂಗಡಿ ಹಾಗೂ ನನ್ನ ಪಕ್ಕದ ಫೈಯಾಜ್ ಪೂಟ್ಸ್ ಅಂಗಡಿಗಳನ್ನು ಸುಟ್ಟು ಭಸ್ಮ ಮಾಡಿದ್ದರು ಆಗ ಡೈಲಿ ಫೈನಾನ್ಸ್ನಲ್ಲಿ ೧೫೦೦೦/- ಸಾಲವನ್ನು ಪಡೆದು ಮತ್ತೆ ಅದೇ ತೆಂಗಿನ ಗರಿಗಳಿಂದ ಪ್ಲಾಸ್ಟಿಕ್ ಟಾರ್ಫಾಲ್ ಹಾಕಿಕೊಂಡು ಮತ್ತೆ ಅಂಗಡಿ ಸರಿಪಡಿಸಿಕೊಂಡು ಹೂವಿನ ಅಂಗಡಿ ವ್ಯಾಪಾರ ಪ್ರಾರಂಭ ಮಡಿಕೊಂಡು ಜೀವನ ಸಾಗಿಸುತ್ತಿದ್ದೇನೆ.
ಆಗ ಗೌನಿಪಲ್ಲಿ ದೊಡ್ಡ ಪ್ರಮಾಣದ ಪತ್ತಿನ ಸಹಕಾರ ಸಂಘದ ಸಮಿತಿಯವರಿಂದ ಪುಟ್ಪಾತ್ನಲ್ಲಿ ತಾತ್ಕಾಲಿಕವಾಗಿ ತೆಂಗಿನ ಗರಿಗಳಿಂದ ನಿರ್ಮಿಸಿಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸುತ್ತೇವೆ ಮತ್ತೆ ನಿಮಗೆ ನಾವು ನಮ್ಮ ಸಮಿತಿಯಿಂದ ಕಬ್ಬಿಣದ ತಗಡಿನ ಶೀಟ್ಗಳಿಂದ 4/4 ಅಡಿಗಳ ಅಂಗಡಿ ಮಳಿಗೆ ಹಾಕಿಸಿಕೊಡುತ್ತೇವೆಂದು ಆಶ್ವಾಸನೆ ನೀಡಿದ್ದರು.ಈಗ ನನಗೆ ಅನ್ಯಾಯ ವಾಗಿದೆ ನ್ಯಾಯಯುತವಾಗಿ ಒಂದು ಅಂಗಡಿ ಮಳಿಗೆ ಕೊಡಿಸಿ ನನ್ನ ಕುಟುಂಬ ಪೋಷಣೆಗೆ ಜೀವನ ಸಾಗಿಸಲು ಅಧಿಕಾರಿಗಳು ಸಹಕರಿಸ ಬೇಕು ಎಂದು ಮನವಿಯನ್ನು ಮಾಡಿದರು.