ಗದಗ: ನಗರದ ಜಗದ್ಗುರು ತೋಂಟದಾರ್ಯ ಮಠದ ಆವರಣದಲ್ಲಿ ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ಮಹಿಳಾ ಸಮಿತಿಯಿಂದ ಪಂಚಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು. ಸಮಾರಂಭದ ನಂತರ ಮಾತನಾಡಿದ ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ಮಹಿಳಾ ಸಮಿತಿಯ ರಾಜ್ಯ ಅಧ್ಯಕ್ಷೆ ಡಾ. ಆರ್ ಈರಮ್ಮ ಅವರು ಸಮಾಜ ಕಲ್ಯಾಣ ಇಲಾಖೆ ಸವಿವ ಎಚ್ ಸಿ ಮಹದೇವಪ್ಪ ಅವರಿಗೆ,
ಲೋಕಸಭಾ ಟಿಕೇಟ್ ಹಂಚಿಕೆ ಹುನ್ನಾರ ನಡೀತಿದ್ದು ಸಿಎಂ ಸಿಧ್ಧರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ ಅದನ್ನ ತಪ್ಪಿಸಬೇಕು ಅಂತಾ ಮನವಿ ಮಾಡಿದ್ರು. ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಎಚ್ ಸಿ ಮಹದೇವಪ್ಪ ಅವರು ದೀನ ದಲಿತರ ಪರ ಹಗಲಿರುಳು ದುಡೀತಿದ್ದಾರೆ ಅಂತಹ ಸಚಿವರನ್ನ ನಾವು ಬಿಟ್ಟು ಕೊಡಲ್ಲ ಅಂತಾ ಮನವಿ ಮಾಡ್ತೇನೆ ಅಂದ್ರು.