ಹುಬ್ಬಳ್ಳಿ; ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಯ್ಲಿಯಲಿ ಭಾರತದ ಕ್ರಿಕೆಟ್ ತಂಡ ಸತತ 9 ಪಂದ್ಯಗಳಲ್ಲಿ ಜಯ ಸಾಧಿಸಿ ವಿಶ್ವಕಪ್ ಫನಲ್ ಪ್ರವೇಶಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಕ್ರಿಕೆಟ್ ಪ್ರೇಮಿಗಳು ಕುಣಿದು ಕುಪ್ಪಳಿದರು. ಪರಸ್ಪರ ಸಿಹಿ ತಿನ್ನಿಸಿದ ಬುಧವಾರ ರಾತ್ರಿಮುಂಬೈನ ವಾಂಕಡೆ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹಿಲಿಯ ದಾಖಲೆಯ 50ನೇ ಶತಕ ಮತ್ತು ಶ್ರೇಯಸ್ ಅಯ್ಯರ್ ಅವರ ಶತಕದ ನೆರವಿನಿಂದ ಬೃಹತ್ ಮೊತ್ತ ಪೇರಿಸಿ,
ಮೊಹಮ್ಮದ ಶಮಿಯ ಕರಾರುವಕ್ಕ ದಾಳಿಯಿಂದ ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಜಯಗಳಿಸಿದ್ದು ಮಹಾನಗರದ್ಯಂತ ದೀಪಾವಳಿ ಹಬ್ಬ ಮತ್ತೊಮ್ಮೆ ಆಚರಿಸಲಾಯಿತು. ಪ್ರತಿ ಗಲ್ಲಿ ಗಲ್ಲಿಗಳಲ್ಲಿ ಭಾರತ ತಂಡಕ್ಕೆ ಶುಭಕೋರುವ ಮುಖಾಂತರ ಫೈನಲ್ ನಲ್ಲಿ ಜಯಗಳಿಸಲು ಪ್ರಾರ್ಥಿಸಲಾಯಿತು. ಉತ್ತರ ಕರ್ನಾಟಕ ಅಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯಾ ಮಠಪತಿ ಸೇರಿದಂತೆ ಮುಂತಾದವರಿದ್ದರು