ಗಯಾನ:ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಟೀಂ ಇಂಡಿಯಾ ಬ್ಯಾಟರ್ಗಳು 20 ರಿಂದ 25 ರನ್ ಹೆಚ್ಚಿಗೆ ಬಾರಿಸಿದರು. ಇನ್ನು ಟೀಂ ಇಂಡಿಯಾ ಬೌಲರ್ಗಳು, ನಮ್ಮ ತಂಡದ ಬೌಲರ್ಗಳಿಗಿಂತ ಅದ್ಭುತ ಪ್ರದರ್ಶನ ತೋರಿದರು. ಹೀಗಾಗಿಯೇ ನಾವು ಪಂದ್ಯ ಕೈಚೆಲ್ಲಬೇಕಾಯಿತು ಎನ್ನುವ ವಿಚಾರವನ್ನು ಬಟ್ಲರ್ ಒಪ್ಪಿಕೊಂಡಿದ್ದಾರೆ. “ಭಾರತ ತಂಡವು ನಮ್ಮೆದರು ಅದ್ಭುತ ಪ್ರದರ್ಶನ ತೋರಿದರು. ನಾವು ಅವರಿಗೆ 20-25 ರನ್ ಹೆಚ್ಚಿಗೆ ಬಿಟ್ಟುಕೊಟ್ಟೆವು. ರನ್ ಗಳಿಸಲು ಸವಾಲೆನಿಸಿದ್ದ ಈ ಪಿಚ್ನಲ್ಲಿ ಭಾರತದ ಬ್ಯಾಟರ್ಗಳು ಚೆನ್ನಾಗಿ ಆಡಿದರು.
ಅವರು ಈ ಗೆಲುವಿಗೆ ಅರ್ಹರು. ಈ ಗೆಲುವಿನ ಶ್ರೇಯ ಭಾರತಕ್ಕೆ ಸಲ್ಲಲೇಬೇಕು. ಯಾಕೆಂದರೆ ಅಷ್ಟು ಚೆನ್ನಾಗಿ ಅವರು ಆಡಿದರು. ಭಾರತ ತಂಡವು ಒಳ್ಳೆಯ ಕ್ರಿಕೆಟ್ ಆಡಿತು. ಅವರು ನಮಗಿಂತ ಚೆನ್ನಾಗಿ ಬೌಲಿಂಗ್ ಮಾಡಿದರು” ಎಂದು ಪಂದ್ಯ ಮುಕ್ತಾಯದ ಬಳಿಕ ಜೋಸ್ ಬಟ್ಲರ್ ಹೇಳಿದರು. “ನಮ್ಮ ತಂಡದ ಇಬ್ಬರು ಸ್ಪಿನ್ನರ್ಗಳಾದ ಆದಿಲ್ ರಶೀದ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಚೆನ್ನಾಗಿ ಬೌಲಿಂಗ್ ಮಾಡಿದರು. ಸ್ಪಿನ್ಗೆ ನೆರವು ನೀಡುತ್ತಿದ್ದ ಪಿಚ್ನಲ್ಲಿ ನಾವು ಮೋಯಿನ್ ಅಲಿಯನ್ನು ಬಳಸಿಕೊಳ್ಳಬೇಕಿತ್ತು” ಎಂದು ಬಟ್ಲರ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಸರ್ವರೋಗಕ್ಕೆ ರಾಮಬಾಣ ಕರಿಬೇವಿನ ಎಲೆಗಳ ರಸ.! ಇಲ್ಲಿವೆ ಕರಿಬೇವು ಎಲೆಗಳ ಅದ್ಭುತ ಪ್ರಯೋಜನಗಳು.!
ಇನ್ನು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಬಗ್ಗೆ ಹೇಳುವುದಾದರೇ, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಆರಂಭಿಕ ಆಘಾತದ ಹೊರತಾಗಿಯೂ ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಇನ್ನು ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಅಕ್ಷರ್ ಪಟೇಲ್,
ಕುಲ್ದೀಪ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿ ಕೇವಲ 103 ರನ್ಗಳಿಗೆ ಸರ್ವಪತನ ಕಂಡಿತು. ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ಸ್ ಬಾರಿಸಿದ 25 ರನ್ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿತು. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಅಭಿಯಾನ ಸೆಮಿಫೈನಲ್ನಲ್ಲಿಯೇ ಅಂತ್ಯವಾಗಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಎದುರು 68 ರನ್ ಅಂತರದ ಜಯ ಸಾಧಿಸುವ ಮೂಲಕ ಫೈನಲ್ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)