ಬೆಂಗಳೂರು: ನೆತ್ತಿ ಸುಡ್ತಿರುವ ರಣ ಬಿಸಿಲಿನಿಂದ ತತ್ತರಿಸಿದ್ದ ಸಿಲಿಕಾನ್ ಸಿಟಿ ಮಂದಿ ಮಳೆಯ ಎಂಟ್ರಿಯಿದ್ದ ಫುಲ್ ಖುಷ್ ಆಗಿದ್ದಾರೆ. ಆದರೆ ಮಳೆಯ ಖುಷಿಯ ನಡುವೆ ಹೊಸ ಭಯ ಶುರುವಾಗಿದೆ. ಸುಳಿವೇ ನೀಡದೆ ಮನೆಗೆ ಎಂಟ್ರಿಯಾಗಿ, ಎಲ್ಲೆಂದರಲ್ಲಿ ಪ್ರತ್ಯೇಕ್ಷವಾಗ್ತಿರುವ ಹೊಸ ಅತಿಥಿಗಳು ಭೀತಿ ಹುಟ್ಟಿಸಿವೆ. ಹಾಲ್.ಕಿಚನ್.ಪ್ರಿಡ್ಜ್ . ಬೆಡ್ ರೂಮ್. ಚಪ್ಪಲಿ ಸ್ಟ್ಯಾಂಡ್. ಪಾರ್ಕಿಂಗ್. ಬಾತ್ ರೂಂ. ವಾಟರ್ ಟ್ಯಾಂಕ್. ಎಲ್ಲೆಲ್ಲೂ ವಿಷ ಸರ್ಪಗಳು ಪ್ರತ್ಯಕ್ಷವಾಗ್ತಿವೆ.
ಕಂಡ ಕಂಡಲ್ಲಿ ಅವಿತುಕೊಳ್ತಿರುವ ನಾಗರಹಾವುಗಳ ರಾಜಧಾನಿ ಜನರನ್ನ ಬೆಚ್ಚಿ ಬೀಳಿಸಿವೆ. ಮಳೆ ಬಂದು ನಿಂತ ನಂತರ ಮನೆಗಳಿಗೆ ಹಾವುಗಳ ಎಂಟ್ರಿಯಾಗೋದು ಕಾಮನ್..ಆದರೆ ಈಗ ಮಳೆ ಬಂದು ಒಂದೆರಡು ದಿನದಲ್ಲಿಯೇ ಮನೆಗಳಿಗೆ ನುಗ್ಗಿ ಸಿಕ್ಕ ಸಿಕ್ಕ ಕಡೆ ವಿಷ ಸರ್ಪಗಳು ಅಡಗಿಕೊಳ್ತಿವೆ. ಬೆಂಗಳೂರಿನಲ್ಲಿ ಉರಗ ತಜ್ಞರಿಗೆ ಬಿರು ಬಿಸಲು ಇದ್ದ ಟ್ರೈಂನಲ್ಲಿ ದಿನಕ್ಕೆ 5-6 ಕೇಸ್ ಬರ್ತಿದ್ದವಂತೆ .
![Demo](https://ainlivenews.com/wp-content/uploads/2023/12/spoorthi-1.jpg)
ಆದರೀಗ 3-4 ದಿನದಲ್ಲಿ ಮನೆಯೊಳಗೆ ಅವಿತಿದ್ದ ನೂರಕ್ಕೂ ಅಧಿಕ ಹಾವುಗಳ ರಕ್ಷಣೆ ಮಾಡಿದ್ದೇವೆ ಅಂತಿದ್ದಾರೆ ಉರಗ ತಜ್ಞರು. ಊಹೆ ಮಾಡಲಾಗದ ಜಾಗದಲ್ಲಿ ಅವಿತುಕೊಳ್ತವೆ ಅಂತಾರೆ ಉಗರ ತಜ್ಞರು ಒಟ್ಟಾರೆ ಹೀಗೆ ಕಂಡಕಂಡಲ್ಲಿ ಪ್ರತ್ಯೇಕ್ಷವಾಗ್ತಿರುವ ಹಾವುಗಳ ರಕ್ಷಿಸಿ ಕಾಡಿಗೆ ಬೀಡುವ ಕೆಲಸ ಉರಗ ತಜ್ಞರು ಮಾಡ್ತಿದ್ದಾರೆ. ನಿಮ್ಮ ಮನೆಯ ಮೂಲೆ ಮೂಲೆಗಳಲ್ಲಿ ಹಾವುಗಳು ಸೇರಿಕೊಂಡಿರಬಹುದು ಸ್ವಲ್ಪ ಎಚ್ಚರಿಕೆಯಿಂದಿರೀ
![](https://ainlivenews.com/wp-content/uploads/2024/01/Ad-Banner-copy-scaled.jpg)