ಬೆಂಗಳೂರು: ನಗರದಲ್ಲಿ ಎದೆಗೆ ಪಿಸ್ತೂಲ್ ಇಟ್ಟು, ಏರ್ ಫೈರ್ ಮಾಡಿದ್ದ ಆರೋಪಿ ಬಂಧನ ಮಾಡಲಾಗಿದ್ದು ಹಣಕಾಸಿನ ವಿಚಾರಕ್ಕೆ ವ್ಯಕ್ತಿಯೋರ್ವನ ಎದೆಗೆ ಪಿಸ್ತೂಲ್ ಇಟ್ಟು ಬೆದರಿಸಿದ್ದ ಸಿರಾಜುದ್ದಿನ್ @ ಬುಲ್ಡುನನ್ನು ಬಂಧಿಸಲಾಗಿದೆ.
ಸೆಪ್ಟೆಂಬರ್ 20 ರಂದು ರಾತ್ರಿ 9.30 ಕ್ಕೆ ನಡೆದಿದ್ದ ಘಟನೆಯಾಗಿದ್ದು ಪಿಸ್ತೂಲ್ ಕೈಯಲ್ಲಿ ಹಿಡಿದು ಆಗಮಿಸಿದ್ದ ರೌಡಿಶೀಟರ್ ಸಿರಾಜುದ್ದಿನ್ @ ಬುಲ್ಡು ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯ ರೌಡಿಶೀಟರ್ ಸಿರಾಜುದ್ದಿನ್ @ ಬುಲ್ಡು ಪ್ಲೈವುಡ್ ಅಂಗಡಿ ಮಾಲೀಕರ ಇಲಿಯಾಸ್ ಎದೆಗೆ ಪಿಸ್ತೂಲ್ ಇಟ್ಟಿ ಬೆದರಿಸಿದ್ದ
ಜನ ಜಮಾಯಿಸಿದ್ದನ್ನ ನೋಡಿ ಯಾರು ಅಡ್ಡ ಬರಬಾರದು ಎಂದು ಏರ್ ಫೈರ್ ಮಾಡಿದ್ದ ಪಿಸ್ತೂಲ್ ನಿಂದ ಗಾಳಿಯಲ್ಲಿ ಒಂದು ಸುತ್ತು ಫೈರ್ ಮಾಡಿದ್ದ ಆಸಾಮಿ ಬಳಿಕ ಅಲ್ಲಿಂದ ಬೈಕ್ ನಲ್ಲಿ ಎಸ್ಕೇಪ್ ಆಗಲು ಮುಂದಾಗಿದ್ದಾನೆ
ಈ ವೇಳೆ ಬೈಕ್ ಹಿಂಬದಿ ಕೂತಿದ್ದ ಮೊಹಮ್ಮದ್ ಖುರಂ ಪಾಷಾ ಎಂಬಾತನನ್ನ ಎಳೆದುಕೊಂಡಿದ್ದ ಇಲಿಯಾಸ್ ಬಳಿಕ ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಇಲಿಯಾಸ್ ಟೀಂ ಘಟನೆ ಸಂಬಂಧ ಎಸ್ ಜಿ ಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದ ಸ್ಥಳೀಯರು
ಘಟನೆ ಸಂಬಂಧ ಎಸ್ ಜಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ದವೂ ಪ್ರಕರಣ ದಾಖಲಾಗಿತ್ತು ಸದ್ಯ ಎರಡು ಪ್ರಕರಣ ಸಂಬಂಧ ರೌಡಿಶೀಟರ್ ಸಿರಾಜುದ್ದಿನ್ ಮತ್ತು ಇಲಿಯಾಸ್ ಸೇರಿದಂತೆ ಆರು ಜನರ ಬಂಧನ