ಬಳ್ಳಾರಿ:- ಲೋಕಸಭೆ ಚುನಾವಣೆಗೆ ಮಾದರಿ ನೀತಿ ಸಂಹಿತೆ ಘೋಷಣೆಯಾದ ಬೆನ್ನಲ್ಲೇ ರಾಜ್ಯದಾದ್ಯಂತ ಅಕ್ರಮವಾಗಿ ನಗದು ಸಾಗಾಟ ಮಾಡುವ ಪ್ರಕರಣಗಳು ಪತ್ತೆಯಾಗುತ್ತಿವೆ. ಜೊತೆಗೆ ಮತದಾರರಿಗೆ ಆಮಿಷವನ್ನು ಸಲುವಾಗಿ ಕುಕ್ಕರ್, ಸೀರೆ, ಆಭರಣ ಹಂಚಲು ರಾಜಕಾರಣಿಗಳು ಮುಂದಾಗಿದ್ದಾರೆ.
ಅದರಂತೆ ಇಲ್ಲಿನ ಬ್ರೂಸ್ ಪೇಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಆಕ್ರಮವಾಗಿ ಗೋದಾಮಿನಲ್ಲಿ ಸಂಗ್ರಹಿಸಿದ್ದ ಕುಕ್ಕರ್ ಹಾಗೂ ಗೃಹ ಬಳಕೆ ವಸ್ತುಗಳನ್ನು ಸೀಜ್ ಮಾಡಿದ್ದಾರೆ. 5.50 ಲಕ್ಷ ಮೌಲ್ಯದ ಕುಕ್ಕರ್, ಪ್ಯಾನ್, ಗ್ಯಾಸ್ ಸ್ಟೋಗಳು ಸೀಜ್ ಮಾಡಿದ್ದಾರೆ.
ಬಳ್ಳಾರಿ ನಗರದ ವಡ್ಡರ ಬಂಡೆಯಲ್ಲಿ ಘಟನೆ ಜರುಗಿದೆ. 300 ಕುಕ್ಕರ್, 150 ಗ್ಯಾಸ್ ಒಲೆ , 66 ಸಿಲಿಂಗ್ ಪ್ಯಾನ್ ಹಾಗೂ ಒಂದು ಟಾಟಾ ಏಸ್ ವಾಹನ ಜಪ್ತಿ ಮಾಡಲಾಗಿದೆ. ಬ್ರೂಸ್ ಪೇಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.