ಚಾಮರಾಜನಗರ:- ಜಿಲ್ಲೆಯ ಅರ್ಧನಾರೀಪುರ ಚೆಕ್ ಪೋಸ್ಟ್ ಬಳಿ ಅಕ್ರಮ ಮದ್ಯ ಸಾಗಾಣಿಕೆ ಹಿನ್ನೆಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಕೊಳ್ಳೇಗಾಲ ಡಿವೈಎಸಪಿ ಧರ್ಮೆಂದ್ರ ಕುಮಾರ್ ಹಾಗೂ ಇನ್ಸಪೆಕ್ಟರ್ ಶಶಿಕುಮಾರ್ ರವರ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಇನ್ನೂ ಕರ್ನಾಟಕದಿಂದ ತಮಿಳುನಾಡು ಕಡೆಗೆ ಅಕ್ರಮವಾಗಿ ಮಧ್ಯ ಸಾಗಣೆ ಮಾಡಲಾಗಿತ್ತಿತ್ತು. ಆರೋಪಿ ಮಗೇಶ್ ಕುಮಾರ್ ಬಿನ್ ಮಣಿ ಬಂಧಿತ ಆರೋಪಿ ಆಗಿದ್ದು, ತಮಿಳುನಾಡಿನ ಶಿರಾಮೊಗೆ ಗ್ರಾಮದ ನಿವಾಸಿ ಎನ್ನಲಾಗಿದೆ.
ದಾಳಿ ವೇಳೆ ಅಕ್ರಮ ಸಾಗಾಣಿಕೆ ವಾಹನವೂ ಸೀಜ್ ಮಾಡಲಾಗಿದ್ದು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಒಡೆಯರಪಾಳ್ಯದ ಅಂಜನಾದ್ರಿ ಬಾರಿಂದ ಅಕ್ರಮ ಮದ್ಯ ಮಾರಾಟ ನಡೆದಿದೆ.
ಅಕ್ರಮ ಮದ್ಯ ಮಾರಾಟದ ಹಿನ್ನಲೆ ಅಂಜನಾದ್ರಿ ಬಾರ್ ಮೇಲೆ ಪೋಲೀಸರ ಕ್ರಮ ಕೈಗೊಂಡಿದ್ದು, ದಾಳಿಯಲ್ಲಿ ಒಡೆಯರ್ ಪಾಳ್ಯ ಉಪ ಠಾಣೆಯ ಮುಖ್ಯಪೇದೆ ದೊಡ್ಡವೀರ ಶೆಟ್ಟಿ, ಪೇದೆಗಳಾದ ಶಿವಕುಮಾರ್ ಮಂಜುನಾಥ್ ಮತ್ತು ಚೆಕ್ ಪೋಸ್ಟ್ ಕರ್ತವ್ಯದಲ್ಲಿದ್ದ ದಶರಥ್ ಭಾಗವಹಿಸಿದ್ದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಪ್ರಸಾದ್ ರವರು ಪ್ರಕರಣ ದಾಖಲಿದ್ದಾರೆ.