ಕೋಲಾರ : ಅಕ್ರಮವಾಗಿ ನಾಡ ಬಂದೂಕನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪಿಯನ್ನು ಮತ್ತು ಮಾಲೀಕನನ್ನು ಬಂಧಿಸಿ, ಒಂದು ನಾಡ ಬಂದೂಕನ್ನು ವಶಪಡಿಸಿಕೊಳ್ಳುವಲ್ಲಿ ಬೇತಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ. ಬೇತಮಂಗಲದ ಮಣಿ ರವರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಮಾಲೂರು ತಾಲ್ಲೂಕು ನಿವಾಸಿ ಶ್ರೀನಿವಾಸ್ ರವರು ಯಾವುದೇ ಪರವಾನಗಿ ಇಲ್ಲದೆ ಎಸ್.ಬಿ.ಎಂ.ಎಲ್ ನಾಡಬಂದೂಕನ್ನು ಅನಧಿಕೃತವಾಗಿ ಇಟ್ಟಿರುವ ಬಗ್ಗೆ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಡಿವೈಎಸ್ಪಿ ಎಸ್.ಪಾಂಡುರಂಗ ಅವರುಗಳ ಮಾರ್ಗದರ್ಶನದಲ್ಲಿ ಬೇತಮಂಗಲ ಸಿಪಿಐ ರಂಗಶಾಮಯ್ಯ, ಬೇತಮಂಗಲ ಪೊಲೀಸ್ ಠಾಣೆಯ ಪಿಎಸ್ಐ ಗುರುರಾಜ್ ಚಿಂತಾಕಲ ಅವರುಗಳ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಆರೋಪಿ ಮಾಲೂರು ತಾಲ್ಲೂಕು ನಿವಾಸಿ ಶ್ರೀನಿವಾಸ ಮತ್ತು ಎಸ್.ಬಿ.ಎಂ.ಎಲ್ ನಾಡಬಂದೂಕನ್ನು ಅಕ್ರಮವಾಗಿ ಸ್ವಾಧೀನದಲ್ಲಿಟ್ಟುಕೊಂಡಿದ್ದ ನಾಗಶೆಟ್ಟಿಹಳ್ಳಿ ನಿವಾಸಿ ನಾಗರಾಜ ಎಂಬುವರನ್ನು ಬಂಧಿಸಿ,
40ರ ನಂತರ ತಂದೆಯಾಗೋ ಬಗ್ಗೆ ಯೋಚನೆ ಮಾಡೋ ಗಂಡಸರೇ ಒಮ್ಮೆ ಈ ಸ್ಟೋರಿ ಓದಿ.!
ನಾಡ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಬೇತಮಂಗಲ ಪೊಲೀಸರು ಪ್ರಕರಣದ ಮುಂದಿನ ಕ್ರಮ ಕೈಗೊಂಡಿರುತ್ತಾರೆ. ಆರೋಪಿಗಳನ್ನು ಬಂಧಿಸಿ, ನಾಡಬಂದೂಕನ್ನು ವಶಪಡಿಸಿಕೊಳ್ಳಲು ಬೇತಮಂಗಲ ಸಿಪಿಐ ರಂಗಶಾಮಯ್ಯ, ಪಿಎಸ್ಐ ಗುರುರಾಜ್ ಚಿಂತಾಕಲ, ಸಿಬ್ಬಂದಿಗಳಾದ ಸಂಪಂಗಿ, ಸತೀಶ್ ಕುಮಾರ್, ತಾಸೀರ್ ಚಾಲಕರಾದ ಮುರಳಿ ಅವರುಗಳ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಶ್ಲಾಘಿಸಿದ್ದಾರೆ.