ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಆಕ್ಟೀವ್ ಆಗಿದೆ ಶ್ರೀಗಂಧ ಮರದ ದಂಧೆ.. ಬೆಂಗಳೂರಿನ ಕೆಆರ್ ಪುರದ ಐಟಿಐ ಫ್ಯಾಕ್ಟರಿ ಆವರಣದ ಗೋಡೌನ್ ನಲ್ಲಿ ಸಂಗ್ರಹಿಸಿದ್ದ ಸುಮಾರು 4000 KG ಗಂಧದ ಮರಗಳನ್ನು ಅರಣ್ಯಧಿಕಾರಿಗಳು ದಾಳಿ ನಡೆಸಿ ಸೀಜ್ ಮಾಡಿದ್ದಾರೆ.. ಐಟಿಐ ಗೋಡೌನ್ ನಲ್ಲಿ ನೂರಾರು ಗಂಧದ ಮರಗಳನ್ನು ಸಂಗ್ರಹಿಸಿ ಆಕ್ರಮ ಸಾಗಟಕ್ಕೆ ಯತ್ನಿಸಲಾಗಿತ್ತು..
ಖಚಿತ ಮಾಹಿತಿ ಮೇರೆಗೆ ರಾಜ್ಯ ಅಪರಾಧ ನಿಯಂತ್ರಣ ಕೋಶ ಹಾಗೂ ಕೆಆರ್ ಪುರ ವಲಯದ ಅಧಿಕಾರಿಗಳಾದ ಆರ್ ಎಫ್ ಓ ರಘು, ಅಮೃತ್, ಸಿದ್ಧರಾಜು, ಅಶ್ವಿನ್ ಅವರು ಜಂಟಿ ಕಾರ್ಯಾಚರಣೆ ನಡೆಸಿ ಗಂಧದ ಮರಗಳನ್ನು ವಶಕ್ಕೆ ಪಡೆದಿದ್ದಾರೆ.. ಸುಮಾರು ಎರಡು ಕೋಟಿಗೂ ಅಧಿಕ ಮೌಲ್ಯ ಎಂದು ಅಂದಾಜಿಸಲಾಗಿದೆ.. ಅರಣ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.