ಚಾಮರಾಜನಗರ: ತಮಿಳುನಾಡಿನ ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ತೆರಕಣಾಂಬಿ ಪೊಲೀಸರು ಬಂಧಿಸಿದ್ದಾರೆ. ತೆರಕಣಾಂಬಿಯ ನಯಾಜ್ (26), ರೋಷನ್ (27) ಬಂಧಿತ ಆರೋಪಿಗಳು, ವಾಹನ ಚಾಲಕ ಕಿಲಗೆರೆಯ ಸೋಮೇಶ್ ಪರಾರಿಯಾಗಿದ್ದಾನೆ. ತೆರಕಣಾಂಬಿ ಹೋಬಳಿಯ ಸೋಮನಪುರ ಕಡೆಯಿಂದ ಮಾದಲವಾಡಿ ಮಾರ್ಗವಾಗಿ ತಮಿಳುನಾಡಿನ ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದರು.
UIIC Jobs: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ಭರ್ಜರಿ ಉದ್ಯೋಗಾವಕಾಶ! ಬೇಗ ಅರ್ಜಿ ಹಾಕಿ
ಖಚಿತ ಮಾಹಿತಿ ಮೇರೆಗೆ ಈ ವೇಳೆ ತೆರಕಣಾಂಬಿಯ ಪೊಲೀಸರಿಂದ ದಿಡೀರ್ ದಾಳಿ ಮಾಡಿದ್ದು, ಗೂಡ್ಸ್ ವಾಹನ ತಡೆದು ಪರಿಶೀಲಿಸಿದ್ದಾರೆ. ವಾಹನದಲ್ಲಿ ಎರಡು ಎತ್ತು ಹಾಗೂ ಒಂದು ಕರು ಇರುವುದು ಕಂಡುಬಂದಿದೆ. ಕೂಡಲೆ ಮಾಲು ಸಮೇತ ಆರೋಪಿಗಳನ್ನು ಬಂಧಿಸಿ ಘಟನೆ ಸಂಬಂಧ ತೆರಕಣಾಂಬಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ಮಾಡಲಾಗಿದೆ.