ಬೆಂಗಳೂರು:- ಮಳೆ ನೀರು ಕೊಯ್ಲು ಪಾಲಿಸದಿದ್ದರೆ ದಂಡ ವಿಧಿಸುವ ನಿರ್ಧಾರವನ್ನು ಜಲಮಂಡಳಿ ಕೈಗೊಂಡಿದೆ.
ಹೊಸ ರೇಷನ್ ಕಾರ್ಡ್ ಪಡೆಯಬೇಕೆ!?.. ಸರ್ಕಾರದಿಂದ ಸಿಕ್ತು ಬಿಗ್ ಅಪ್ಡೇಟ್..
ನಗರದಲ್ಲಿ ಹಲವಾರು ಕಡೆ ಮನೆಯ ನೀರನ್ನ ನೇರವಾಗಿ ಒಳಚರಂಡಿಗೆ ಕನೆಕ್ಷನ್ ಮಾಡಲಾಗಿದೆ. ಇದರಿಂದ ಮಳೆಗಾಲದ ಸಮಯದಲ್ಲಿ ಡ್ರೈನೆಜ್ ವಾಟರ್ ಉಕ್ಕಿ ಹರಿಯುತ್ತವೆ. ಹೀಗಾಗಿ ಅನಧಿಕೃತ ಒಳಚರಂಡಿಗೆ ಕನೆಕ್ಷನ್ ಇದ್ದರೆ ದಂಡ ಹಾಕಲು ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದ್ದಾರೆ. ಮಳೆ ನೀರು ಒಳಚರಂಡಿಗೆ ಕನೆಕ್ಷನ್ ಇದ್ದರೆ ಅದನ್ನ ತಗಿಯಲು ಇಂದಿನಿಂದ 15 ದಿನಗಳು ಕಾಲಾವಕಾಶ ಕೊಡಲಾಗಿದೆ
ಜೂನ್ ೧೦_ರ ನಂತರ ನೀರು ಅನಧಿಕೃತವಾಗಿ ಒಳಚರಂಡಿಗೆ ಹರಿದು ಹೋಗುವುದು ಕಂಡುಬಂದರೆ ತಕ್ಷಣ ದಂಡ ವಿಧಿಸಲು ಜಲಮಂಡಳಿ ನಿರ್ಧಾರ ಮಾಡಲಾಗಿದೆ. ಡಿಸಿಎಂ, ಡಿ.ಕೆ ಶಿವಕುಮಾರ್ ಆದೇಶದ ಮೇರೆಗೆ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಖಡಕ್ ಆದೇಶ ಹೊರಡಿಸಿದ್ದಾರೆ