ಹಿಂದೂ ಧರ್ಮದಲ್ಲಿ, ನಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ತೊಂದರೆಗಳನ್ನು ತೊಡೆದುಹಾಕಲು ದೈನಂದಿನ ಪೂಜೆಯ ಮಾರ್ಗವೇ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ನಿತ್ಯ ಪೂಜೆ ಮತ್ತು ಮಂತ್ರ ಪಠಣದಿಂದ ಆಧ್ಯಾತ್ಮಿಕ ಬೆಳವಣಿಗೆಯಾಗುತ್ತದೆ ಮತ್ತು ದೇವರಲ್ಲಿ ನಂಬಿಕೆ ಹುಟ್ಟುತ್ತದೆ. ಪೂಜೆಯೂ ಮನಸ್ಸಿನಲ್ಲಿ ಶಾಂತಿಯನ್ನು ಕಾಪಾಡುತ್ತದೆ. ನಮ್ಮಲ್ಲಿ ಯಾವುದೇ ಕಠಿಣ ಕಾರ್ಯವನ್ನು ಮಾಡುವ ಸಾಮರ್ಥ್ಯವನ್ನು ಹುಟ್ಟುಹಾಕುತ್ತದೆ. ಪೂಜೆಯು ನಮ್ಮ ಇಂದ್ರೀಯಗಳ ಮೇಲೆ ನಿಯಂತ್ರಿಸುವುದಕ್ಕೂ ಸಹಕಾರಿಯಾಗಿದೆ.
ಪಾಸ್ಪೋರ್ಟ್ ಗೆ ಸಂಬಂಧಿಸಿ ಕೇಂದ್ರದ ಮಹತ್ವದ ಸೂಚನೆ: ದೇಶಾದ್ಯಂತ ಹೊಸ ಕಾನೂನು ಜಾರಿ!
ಧರ್ಮ, ದೇವರಿಲ್ಲದೇ ಏನು ಇಲ್ಲವೆಂಬುದು ಅನೇಕರಿಗೆ ತಿಳಿದೇ ಇಲ್ಲ. ದೇವರ ಆಶೀರ್ವಾದವನ್ನು ಪಡೆದುಕೊಳ್ಳಲು ಬಯಸುವ ವ್ಯಕ್ತಿಯು ಕೆಲವೊಂದು ಆಚರಣೆಗಳನ್ನು ಅನುಸರಿಸುವುದು ಉತ್ತಮ. ಪ್ರತಿನಿತ್ಯ ನಾವು ಈ ಆಚರಣೆಗಳನ್ನು ಅನುಸರಿಸುವ ಮೂಲಕ ಧನಾತ್ಮಕತೆಯನ್ನು ಆಕರ್ಷಿಸಬಹುದು ಅಥವಾ ದೇವರ ಆಶೀರ್ವಾದವನ್ನೂ ಪಡೆದುಕೊಳ್ಳಬಹುದು. ಅಂತಹ ಆಚರಣೆಗಳ ಕುರಿತು ನಾವಿಲ್ಲಿ ತಿಳಿದುಕೊಳ್ಳೋಣ.
ಹಿಂದೂ ಧರ್ಮದಲ್ಲಿ ಜಪಮಾಲೆಯ ಬಳಕೆ ತುಂಬಾನೇ ಹೆಚ್ಚಾಗಿದೆ. ಜಪಮಾಲೆಯನ್ನು ಹಿಡಿದು ಮಂತ್ರಗಳನ್ನು ಪಠಿಸಲಾಗುತ್ತದೆ. ಧ್ಯಾನವನ್ನು ಮಾಡಲಾಗುತ್ತದೆ. ಜಪಮಾಲೆಯನ್ನು ಯಾರು ಬೇಕಾದರೂ ಎಲ್ಲಿಯಾದರೂ ಕುಳಿತು ಅಥವಾ ನಿಂತುಕೊಂಡು ಪಠಿಸಬಹುದು. ಜಪಮಾಲೆಯನ್ನು ಹಿಡಿದು ಮಣಿಗಳನ್ನು ಎಣಿಸುವುದರಿಂದ ನಿಮ್ಮ ಏಕಾಗ್ರತೆ ಮಟ್ಟವು ವೃದ್ಧಿಯಾಗುವುದು. ಮನಸ್ಸಿನಲ್ಲಿ ಅಡೆತಡೆಗಳು ನಿವಾರಣೆಯಾಗುವುದು. ನಿಮ್ಮ ಇಷ್ಟ ದೇವರೊಂದಿಗೆ ಸಂಪರ್ಕವನ್ನು ಸಾಧಿಸಲು ಸಹಾಯ ಮಾಡುವುದು.
ಹಿಂದೂ ಧರ್ಮದಲ್ಲಿ ತಿಲಕಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ನಾವು ನಮ್ಮ ಸುತ್ತಮುತ್ತ ತಿಲಕವನ್ನಿಟ್ಟುಕೊಂಡ ವ್ಯಕ್ತಿಯನ್ನು ನೋಡಿದಾಕ್ಷಣ ಹೇಳಬಹುದು ಈತ ಯಾವ ಧರ್ಮದವನು ಎಂದು. ತಿಲಕವು ಧರ್ಮದ ಸಂಕೇತವಾಗಿದೆ. ತಿಲಕವನ್ನು ನಮ್ಮ ಹುಬ್ಬುಗಳ ಮಧ್ಯ ಭಾಗದಲ್ಲಿ ಇಡಲಾಗುತ್ತದೆ. ಈ ಸ್ಥಳವನ್ನು ಆಜ್ಞಾ ಚಕ್ರವೆಂದು ಕರೆಯಲಾಗುತ್ತದೆ. ಈ ಕೇಂದ್ರಬಿಂದುವು ದೈಹಿಕ ಮತ್ತು ಆಧ್ಯಾತ್ಮಿಕ ಗುಣಗಳನ್ನು ಸ್ಥಿರಗೊಳಿಸುತ್ತದೆ ಹಾಗೂ ಒಟ್ಟಾರೆಯಾಗಿ ವ್ಯಕ್ತಿಯ ಮನಸ್ಸು ಮತ್ತು ದೇಹದಲ್ಲಿ ಏಕತೆಯನ್ನು ಸೃಷ್ಟಿಸುತ್ತದೆ. ಇದರ ಹೊರತಾಗಿ, ತಿಲಕವು ಸಕಾರಾತ್ಮಕ ಪ್ರಭಾವವನ್ನು ತೋರಿಸುತ್ತದೆ ಮತ್ತು ಪ್ರತಿಯಾಗಿ ಆಶೀರ್ವಾದವಾಗಿ ಸಕಾರಾತ್ಮಕತೆಯನ್ನು ಆಕರ್ಷಿಸುತ್ತದೆ.
ಆಧುನಿಕ ದಿನಗಳಲ್ಲಿ ದೇವರ ಆಶೀರ್ವಾದವನ್ನು ಪಡೆದುಕೊಳ್ಳಲು ಇರುವ ಇನ್ನೊಂದು ಸರಳ ಮಾರ್ಗವೆಂದರೆ ಅದುವೇ ದೇವರ ಮಂತ್ರಗಳನ್ನು, ನಾಮಗಳನ್ನು ಪಠಿಸುವುದು. ಭಜನೆ, ಕೀರ್ತನೆಗಳನ್ನು ಹಾಡುವುದಾಗಿದೆ. ಇದೊಂದು ಭಕ್ತಿಪೂರ್ವಕವಾದ ಆಧ್ಯಾತ್ಮಿಕ ಪಠಣವಾಗಿದೆ. ಕೀರ್ತನೆಯನ್ನು ಅಥವಾ ಭಜನೆಯನ್ನು ನೀವು ಯಾರು ಬೇಕಾದರೂ, ಎಲ್ಲಿ ಬೇಕಾದರೂ ಯಾವ ಸಮಯದಲ್ಲಿ ಬೇಕಾದರೂ ಹಾಡಬಹುದು. ಭಜನೆ ಕೀರ್ತನೆಗಳನ್ನು ಹಾಡುವುದರಿಂದ, ಕೇಳುವುದರಿಂದ ಆತ್ಮವು ಧನಾತ್ಮಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಮಾನಸಿಕ ಶಾಂತಿಯನ್ನು ತರುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಇದೊಂದು ರಾಮ ಬಾಣವಾಗಿದೆ.
ನಾವು ತಿನ್ನುವ ಪ್ರತಿಯೊಂದು ಆಹಾರ ಕೂಡ ನಮ್ಮ ದೇಹ, ಮನಸ್ಸು ಮತ್ತು ಆತ್ಮದ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತದೆ. ನಮ್ಮ ಹಿಂದೂ ಶಾಸ್ತ್ರದಲ್ಲಿ ಧಾರ್ಮಿಕ ಗ್ರಂಥಗಳಲ್ಲಿ ಸೂಚಿಸಲಾದ ಆಹಾರವನ್ನು ಸೇವಿಸುವುದರಿಂದ ಆಧ್ಯಾತ್ಮಿಕ ಶಕ್ತಿಯನ್ನು ಪಡೆದುಕೊಳ್ಳಬಹುದು. ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ತಾಮಸಿಕ ಆಹಾರಗಳಾದ ಈರುಳ್ಳಿ, ಬೆಳ್ಳುಳ್ಳಿಯಂತಹ ತಾಮಸಿಕ ಆಹಾರಗಳನ್ನು ಸೇವಿಸಬಾರದು ಎಂದು ಹೇಳಲಾಗಿದೆ. ನಾವು ಹೆಚ್ಚಾಗಿ ಸಾತ್ವಿಕ ಆಹಾರ ಪದ್ಧತಿಯನ್ನು ಅನುಸರಿಸಬೇಕು. ಇದರೊಂದಿಗೆ ಮದ್ಯಪಾನ ಹಾಗೂ ಧೂಮಪಾನದಂತಹ ದುಶ್ಚಟಗಳಿಂದಲೂ ದೂರ ಉಳಿಯಬೇಕು.
ನಾವು ಯಾವಾಗಲೂ ದೇವರನ್ನು ನಂಬುವಂತಹ ಅಥವಾ ಆಸ್ತಿಕರ ಸಹವಾಸವನ್ನು ಮಾಡಬೇಕು. ದೇವರ ಮೇಲೆ ನಂಬಿಕೆಯನ್ನಿಟ್ಟುಕೊಳ್ಳದ, ನಾಸ್ತಿಕರ ಸಹವಾಸವನ್ನು ಮಾಡಲು ಹೋಗಬಾರದು. ದೇವರನ್ನು ಒಲಿಸಿಕೊಳ್ಳಲು ಬಯಸುವವರು ಋಷಿಗಳ, ಸಂತರ, ಮಹಾನ್ ವ್ಯಕ್ತಿಗಳ ಸಹವಾಸವನ್ನು ಮಾಡಬೇಕು. ಪೂಜೆ, ಪುನಸ್ಕಾರಗಳು ಸೇರಿದಂತೆ ಧಾರ್ಮಿಕ ಚಟುವಟಿಕೆಗಳು ನಡೆಯುವಂತಹ ಸ್ಥಳಗಳಿಗೆ ಹೋಗಬೇಕು.