ಹಾವು ಕಡಿದಾಗ ಏನು ಮಾಡಬೇಕು ಎಂದು ಉತ್ತರ ಕನ್ನಡದ ಸ್ನೇಕ್ ಪವನ್ ಮಾಹಿತಿ ನೀಡಿದ್ದಾರೆ. ನಿಮಗೆ ಗೊತ್ತಿರುವ ಅಥವಾ ಯೂಟ್ಯೂಬ್ ನೋಡಿ ಈ ತಪ್ಪುಗಳನ್ನು ಮಾಡಬೇಡಿ.
ಹಾವು ಕಡಿದ ಜಾಗದಿಂದ ರಕ್ತ ಹೋಗಲು ಆ ಸ್ಥಳವನ್ನು ಹಲವರು ಕುಯ್ಯುತ್ತಾರೆ. ಆದ್ರೆ ಆ ರೀತಿ ಮಾಡಬಾರದು. ಆ ರೀತಿ ಮಾಡಿದ್ರೆ ಹೆಚ್ಚು ರಕ್ತ ದೇಹದಿಂದ ಹೊರ ಹೋಗಿ ತೊಂದರೆಯಾಗಬಹುದು.
ಹಾವು ಕಡಿದ ತಕ್ಷಣ ತುಂಬಾ ಹೆದರಿಕೊಳ್ತಾರೆ. ಆಗ ತಕ್ತದೊತ್ತಡ ಹೆಚ್ಚಾಗುತ್ತೆ. ಅದಕ್ಕೆ ಧೈರ್ಯ ತಂದುಕೊಳ್ಳಬೇಕು. ಇದರಿಂದ ರಕ್ತದೊತ್ತಡ ಏರುಪೇರು ಆಗೋದಿಲ್ಲ.
ಹಾವು ಕಡಿದ ಜಾಗವನ್ನು ನೀರಿನಿಂದ ತೊಳೆಯಬೇಕು. ಕೈಯಿಂದಲೇ ಸಾಧ್ಯವಾದಷ್ಟು ವಿಷವನ್ನು ಹೊರಗೆ ಹಾಕಬೇಕು. ಅದು ಬಿಟ್ಟು ಬಾಯಿಂದ ವಿ ತೆಗೆಯುವು ಅಪಾಯಕಾರಿ. ಅದು ಇಬ್ಬರು ವ್ಯಕ್ತಿಗಳಿಗೆ ತೊಂದ್ರೆ ಉಂಟುಮಾಡುತ್ತೆ. ಹಾವು ಕಚ್ಚಿದ ಮೇಲೆ ಆಸ್ಪತ್ರೆಗೆ ತೆರಳಿ ಸಿಟಿಬಿಟಿ ಟೆಸ್ಟ್ ಮಾಡಿಸಿ. ಅದರಲ್ಲಿ ಕಚ್ಚಿರುವುದು ವಿಷಕಾರಿ ಹಾವೋ, ಅಲ್ಲವೋ ತಿಳಿಯುತ್ತದೆ. ಆಗ ಅದಕ್ಕೆ ವೈದ್ಯರು ಚಿಕಿತ್ಸೆ ನೀಡ್ತಾರೆ. ವಿಷ ಇಲ್ಲದ ಹಾವಿನ ಕಡಿತವಾದರೆ ಟಿಟಿ ಇಂಜಕ್ಷನ್ ಕೊಡುತ್ತಾರೆ. ವಿಷಕಾರಿ ಹಾವಿನ ಕಡಿತಕ್ಕೆ ತಕ್ಕ ಚಿಕಿತ್ಸೆ ಕೊಡುತ್ತಾರೆ ವೈದ್ಯರು. ಆಗ ವ್ಯಕ್ತಿ ಅಪಾಯದಿಂದ ಪಾರಾಗ್ತಾನೆ.