ಇಂದಿನ ಮಕ್ಕಳಲ್ಲಿ ಕ್ರಿಯಾಶೀಲತೆ ಹಾಗೂ ಶುದ್ಧ ಬರಹ ಶೈಲಿ ಕಾಣುತ್ತೇವೆ, ಪ್ರತಿಭೆಗಳಿಗೆ ಕಲಿಕೆಯ ಆಸಕ್ತಿ ಇದ್ದಲ್ಲಿ ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ಸಮರ್ಥವಾಗಿ ಎದುರಿಸಿ ಸಾಧನೆ ಮಾಡಲು ಹಾದಿ ಸುಗಮವಾಗುತ್ತದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಭೀಮಶಿ ಮಗದುಮ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಸುವರ್ಣ ಪೇಟ್ಸ್ ಮಾಲೀಕರಾದ ಶ್ರೀಮತಿ ಸುರೇಖಾ ಆನಂದ ಪಟ್ಟಣ, ಅವರು ಹಮ್ಮಿಕೊಂಡಿದ ಸನ್ 2023-24 ಸಾಲಿನ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ಬಡ ವಿಧ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಬಡತನ ಕಲಿಕೆಗೆ ಅಡ್ಡಿ ಆಗದು, ತೀವ್ರತರ ಆಸಕ್ತಿ ಸಾಧನೆಗೆ ಮೆಟ್ಟಿಲಾಗುತ್ತದೆ, ಪ್ರತಿಭೆ ಗುಡಿಸಲಲ್ಲಿ ಹುಟ್ಟಿ ಅರಮನೆಯಲ್ಲಿ ಬೆಳಗಬಲ್ಲದು ಎಂಬುದಕ್ಕೆ ಅನೇಕ ಉದಾಹರಣೆಯಲ್ಲಿದ್ದಾರೆ ಎಂದರು. ಪ್ರತಿಭಾವಂತ ಬಡ ವಿಧ್ಯಾರ್ಥಿಗಳಿಗೆ ನಗದು ರೂಪದಲ್ಲಿ ಕಿರುಕಾಣಿಕೆ ನೀಡಿದರು.
ಅಸಾಧ್ಯ ಎಂಬ ಪದವೇ ಜಗತ್ತಿನಲ್ಲಿ, ಶಿಕ್ಷಕರು ಸರಿಯಾದ ಮಾರ್ಗದರ್ಶನ, ಏಕಾಗ್ರತೆ, ಸುರಕ್ಷಿತ ಆಹಾರ ಕ್ರಮ ಸತತ ಅಧ್ಯಯನ ಶೀಲತೆ ಅಳವಡಿಸಿಕೊಂಡಲ್ಲಿ ಉತ್ತರ ಕರ್ನಾಟಕದ ಮಕ್ಕಳು ಎಂಥದೇ ಕಠಿಣ ಪರಿಸ್ಥಿತಿ ಮೆಟ್ಟಿನಿಂತು ಸಾಧನೆಯ ಶಿಖರವೇರಬಲ್ಲರು ಶಂಕರ ಜುಂಜಪ್ಪನವರ ಹೇಳಿದರು. ಎಸ್ ಎಸ್ ಎಲ್ ಸಿ ಅತಿ ಹೆಚ್ಚು ಅಂಕ ಪಡೆದು ಪ್ರತಿಭಾವಂತ ವಿದ್ಯಾರ್ಥಿಗಳಾದ ಸೌಂದರ್ಯ ಮಾಳಿ, ಶಂಕ್ರರೆಮ್ಮ ಕುಳ್ಳಿ, ಶಿವಾನಿ ಪಟ್ಟಣ, ರಾಜು ಮಾದರ, ಇವರುಗಳನ್ನು ಸನ್ಮಾನಿಸಲಾಯಿತು
ಇದೇ ಸಂದರ್ಭದಲ್ಲಿ ಪಂಡಿತ ಪಟ್ಟಣ, ಸುರೇಶ ಕೋಲಾರ, ಬಸವರಾಜ ಪುಟ್ಟಾಣಿ, ಸಂಜಯ ಪಟ್ಟಣ, ಉಮೇಶ ಸಣಕಲ್ಲ, ಶಿವಲಿಂಗ ಇಟ್ನಾಳ, ಚಂದ್ರಶೇಖರ ಅಂಬಲಿ, ವಿಶ್ವನಾಥ ಬಂದಿ, ಬಸವರಾಜ ಪಟ್ಟಣ, ಶಿವಕುಮಾರ ಜುಂಜಪ್ಪನವರ, ನಾಯಕವಾಡಿ, ಜಮಖಂಡಿ, ಕಂಕಣವಾಡಿ ಗುರುಗಳು, ಶ್ರೀಮತಿ ಸುವರ್ಣ ಪಟ್ಟಣ, ಶ್ರೀಮತಿ ಪ್ರೀತಿ ಸಣಕಲ್ಲ, ಶ್ರೀಮತಿ ರಾಜೇಶ್ವರಿ ಪಟ್ಟಣ, ಶ್ರೀಮತಿ ಸುರೇಖಾ ಪಟ್ಟಣ, ಸೇರಿಸದಂತೆ ಮುಂತಾದವ್ರು ಪಾಲ್ಗೊಂಡಿದ್ದರು
ಪ್ರಕಾಶ ಕುಂಬಾರ
ಬಾಗಲಕೋಟೆ