ಬೆಂಗಳೂರು:- ಕನ್ನಡಿಗರಿಗೆ ಮೀಸಲಾತಿ ಕೊಡಲು ಸರ್ಕಾರ ಹೆದರಿದ್ರೆ ದಂಗೆ ಏಳ್ತೀವಿ ಎಂದು ಕರವೇ ನಾರಾಯಣಗೌಡ ಹೇಳಿದ್ದಾರೆ.
ರಾಜ್ಯದೆಲ್ಲೆಡೆ ವರುಣನ ಆರ್ಭಟ: ಆದ್ರೆ ಈ ಜಿಲ್ಲೆಯಲ್ಲಿ ಮಾತ್ರ ಮಳೆಗಾಗಿ ವಿಶೇಷ ಪೂಜೆ!
1954ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ ಸಂದರ್ಭದಲ್ಲಿ ರಾಜ್ಯದ ಹೊರ ರಾಜ್ಯಗಳಿಂದ ಬಹಳಷ್ಟು ಜನ ವಲಸೆ ಬರುತ್ತಿದ್ದ ಕಾರಣ ಡಾ. ಸರೋಜಿನಿ ಮಹಿಷಿ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಆ ಸಮಿತಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಎಷ್ಟು ಎಷ್ಟು ಹುದ್ದೆ ಮೀಸಲಿಡ ಬೇಕು ಅಂತ ವರದಿ ನೀಡಿತ್ತು. ಆದ್ರೆ ಆ ವರದಿ ಚಾಲನೆಗೆ ಬರಲಿಲ್ಲ ಅಂತ ನಾರಾಯಣ ಗೌಡ ಹೇಳಿದ್ರು.
ಸಿದ್ದರಾಮಯ್ಯ ಅವ್ರು ಸದನದಲ್ಲಿ ಮಂಡನೆಯಾಗ ಬೇಕಿದ್ದ ಕಾಯ್ದೆಯನ್ನು ತಡೆದಿದೆ, ವರದಿ ಜಾರಿಯಾಗಿಲ್ಲ. 40 ವರ್ಷದಿಂದ ಡಾ ಸರೋಜಿನಿ ವರದಿ ಜಾರಿಗೆ ತರುವಂತೆ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಜುಲೈ ಒಂದರಂದು ಸಹ ಕರವೇ ರಾಜ್ಯದ ಎಲ್ಲ ಜಿಲ್ಲೆಯಲ್ಲಿಯೂ ಖಾಸಗಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವಂತೆ ಹೋರಾಟ ಮಾಡಿಕೊಂಡು ಬಂದಿದೆ. ಕೆಲಸಕ್ಕಾಗಿ ಕನ್ನಡಿಗರು ರಾಜ್ಯದಿಂದ ಬೇರೆ ಬೇರೆ ರಾಜ್ಯಗಳಿಗರ ಹೋಗ್ತಾ ಇದ್ದಾರೆ. ಕರವೇ ನಿಯೋಗ ಇದೇ ವಿಚಾರವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ನೀಡಿದೆ. ನಮ್ಮ ಸರ್ಕಾರ ಕನ್ನಡಿಗರ ಪರ ಸರ್ಕಾರ ಅನ್ನೋದಾಗಿ ಭರವಸೆ ನೀಡಿದ್ರು ಅಂತ ನಾರಾಯಣ ಗೌಡ ಹೇಳಿದ್ದಾರೆ
ಸಚಿವ ಸಂಪುಟದದಲ್ಲಿ ಈ ವಿಚಾರವಾಗಿ ಚರ್ಚೆ ಮಾಡಿ, ಖಾಸಗಿ ವಲಯದಲ್ಲಿ ಡಿ ಮತ್ತು ಸಿ ವಿಭಾಗದಲ್ಲಿ 100 ಕ್ಕೆ 100 ರಷ್ಟು ಮೀಸಲಾತಿ ತರ್ಬೇಕು ಎಂದು ಚರ್ಚೆ ನಡೆದು ವಿದೇಯಕವನ್ನು ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಗೆ ತರುವ ತೀರ್ಮಾನವಾಗಿತ್ತು. ಸಚಿವ ಸಂಪುಟದ ತೀರ್ಮಾನ ತಿಳಿದು ಖುಷಿ ಆಯ್ತು ನಾನು ಖುದ್ದು ಹೋಗಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ತಿಳಿಸಿ ಬಂದೆ ಅಂತ ವಿವರಿಸಿದ್ರು.
ಇನ್ನೂ ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಮಸೂದೆ ಜಾರಿಗೆ ಸರ್ಕಾರ ಮುಂದಾಗಿತ್ತು. ಆದರೆ ಮೋಹನ್ ದಾಸ್ ಪೈ , ಕಿರಣ್ ಮಜುಂದಾರ್ ಶಾ ಸೇರಿದಂತೆ ಹಲವು ಉದ್ಯಮಿಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಯೂಟರ್ನ್ ಹೊಡೆದಿದೆ.