ಕೇಂದ್ರ ಸರ್ಕಾರದಿಂದ ಕಿಸಾನ್ ಸಮ್ಮಾನ ಮಾದರಿಯಲ್ಲಿ ನೇಕಾರ ಸಮ್ಮಾನ ಜಾರಿಯಾಗಬೇಕು. ನೇಕಾರರನ್ನು ಕಾರ್ಮಿಕರೆಂದು ಘೋಷಿಸಿ. ಆತ್ಮಹತ್ಯೆಗೊಳಗಾದ ಕುಟುಂಬಗಳಿಗೆ 10ಲಕ್ಷ ಪರಿಹಾರ ಧನ ಸೇರಿದಂತೆ ಹಲವು ಬೇಡಿಕೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. 48,000 ಜನ ಕುಟುಂಬಗಳು ನೇಕಾರಿಕೆ ಮಾಡುತ್ತಿದ್ದರು ಆದರೆ ಇವತ್ತು ಕೇವಲ ನಾಲ್ಕು ಸಾವಿರದ ಎರಡು ನೂರು ಮಗ್ಗಗಳು ನೇಕಾರರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
ಅವನತಿಯ ಅಂಚಿನಲ್ಲಿರುವ ನಿಗಮವು ನೂರಾರು ಕೋಟಿ ರೂಪಾಯಿಗಳ ಸಾಲದ ಹೊರೆಯಲ್ಲೇ ಸಾಗುತ್ತಿದ್ದೂ ಕಳೆದ ಸರ್ಕಾರದ ಅವಧಿಯಲ್ಲಿ ನೂರಾರು ಕೋಟಿ ರೂಪಾಯಿಗಳ ಹಗರಣ ನಡೆದು ಸೂಕ್ತವಾದ ತನಿಖೆಯೂ ಆಗಲಿಲ್ಲ ಇದರ ದುಸ್ಥಿತಿಯ ಪರಿಣಾಮವಾಗಿ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೆಹೆಚ್ ಡಿ ಸಿ ಯಲ್ಲಿ 40 ವರ್ಷಗಳಿಂದ ವಾಸವಾಗಿರುವ ನೇಕಾರರಿದ್ದು ಅವರಿಗೆ ಸಿ. ಟಿ. ಎಸ್ ಉತಾರ ದೊರೆಯದೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು ಅಲ್ಲದೆ ನೂರಾರು ಜನರಿಗೆ ನಿವೇಶನಗಳು ಇರದೇ ಬಾಡಿಗೆ ಮನೆಯಲ್ಲಿದ್ದಾರೆ.
ಇತ್ತೀಚೆಗೆ ಸಮರ್ಪಕ ಯೋಜನೆಗಳು ದೊರೆಯದ ಕಾರಣ ಕೆಲವಿಷ್ಟು ನೇಕಾರರಿಗೆ ಕಚ್ಚಾ ವಸ್ತುವಿನ ಕೊರತೆಯಿಂದಾಗಿ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಈ ಕುರಿತು ಸಾಕಷ್ಟು ಹೊರಟಾಗಳನ್ನು ಮಾಡಿದರು ಜವಳಿ ಸಚಿವರಿಗೆ ಮುಖ್ಯಮಂತ್ರಿಗಳಿಗೆ ಹಾಗೂ ಕೇಂದ್ರ ಸರ್ಕಾರದ ಗಮನಕ್ಕು ತರಲಾಗಿದ್ದು ಯಾವ ಪ್ರಯೋಜನವು ಆಗದೆ ಇದ್ದು ಈಗಲೂ ಸಮಸ್ಯೆ ಇತ್ಯರ್ಥವಾಗದೆ ಹೋದಲ್ಲಿ ಮತ್ತೆ ಹೋರಾಟಕ್ಕೆ ಸಿದ್ದರಾಗುತ್ತೇವೆ ಎಂದು ನೇಕಾರರ ಕರ್ನಾಟಕ ರಾಜ್ಯಾಧ್ಯಕ್ಷ ಶಿವನಿಂಗ ಟಿರಕಿ ಹೇಳಿದರು.
ಕೂಡಲೇ ಸರ್ಕಾರ ನೇಕಾರರ ಸಮಸ್ಯೆಗಳನ್ನು ಬಗೆಹರಿಸಿ ಇಲ್ಲಾಂದ್ರೆ 2024 ರ ಲೋಕಸಭಾ ಚುನಾವಣೆಯನ್ನು ಎಲ್ಲಾ ನೇಕಾರ ಸಮುದಾಯದವರು ಸೇರಿ ಮತದಾನವನ್ನು ಬಹಿಸ್ಕಾರ ಮಾಡಲು ನಿರ್ಧಾರದ ಹೆಜ್ಜೆಯನ್ನು ಇಡಬೇಕಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂಗಪ್ಪ ಉದಗಟ್ಟಿ. ಬಸವರಾಜ ಮನ್ಮಿ. ಗಂಗಪ್ಪ ಹುಕ್ಕೇರಿ. ವಿಶ್ವನಾಥ ಹುಳ್ಯಾಳ ಶಂಕರ ಹುಳ್ಯಾಳ. ಮಹಾಂತೇಶ ಖವಾಸಿ. ಸೇರಿದಂತೆ ಅನೇಕ ಮಹಿಳೆಯರು ಉಪಸ್ಥಿತರಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ