ಬೆಂಗಳೂರು:- ಕೇಬಲ್ ಗಳನ್ನು ಕತ್ತರಿಸಿ ಹಾಕಿದರೆ ಅವರೇ ದಾರಿಗೆ ಬರುತ್ತಾರೆ ಎಂದು ಹೇಳುವ ಮೂಲಕ ಬಿಬಿಎಂಪಿಗೆ ಡಿ ಕೆ ಶಿವಕುಮಾರ್ ಮಹತ್ವದ ಸೂಚನೆ ಕೊಟ್ಟಿದ್ದಾರೆ.
ಕಂಡಕ್ಟರ್ ಮೇಲೆ ಹಲ್ಲೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ: ಬಿ ಎನ್ ಜಗದೀಶ್!
ಈ ಬಗ್ಗೆ ಮಾತನಾಡಿದ DCM ಡಿಕೆಶಿ,ಹೊರಗಡೆ ಇರುವ ಎಲ್ಲಾ ಕೇಬಲ್ ವಯರ್ ಗಳನ್ನು ಕಿತ್ತು ಹಾಕಬೇಕು. ಇವುಗಳನ್ನು ಭೂಗತವಾಗಿ ಹಾಕುವಂತಹ ವ್ಯವಸ್ಥೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ. ಇಷ್ಟು ದಿನ ಕಾದೆವು ಏನಾದರೂ ಬದಲಿ ವ್ಯವಸ್ಥೆ ಮಾಡಿಕೊಳ್ಳುತ್ತಾರೆ ಎಂದು, ಇದಾಗದ ಕಾರಣ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಲ್ಲಾ ಕೇಬಲ್ ಗಳನ್ನು ಕತ್ತರಿಸಿದರೆ ಅವರೇ ದಾರಿಗೆ ಬರುತ್ತಾರೆ” ಎಂದು ಹೇಳಿದರು.
ಹೊಸ ಯೋಜನೆಗಳು, ಬೆಂಗಳೂರಿನ ರೂಪುರೇಷೆಗಳ ಬಗ್ಗೆ, ಪ್ರತಿ ನಾಗರೀಕನ ಆಸ್ತಿ ರಕ್ಷಣೆ ಕುರಿತು ಹೊಸ ನೀತಿಗಳನ್ನು ತರಲಾಗಿದ್ದು ಅದನ್ನು ಫೆಬ್ರವರಿ ತಿಂಗಳ ಕೊನೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಬಹಿರಂಗಗೊಳಿಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸುರಂಗರಸ್ತೆಯ ನಿರ್ಮಾಣಕ್ಕೆ ಹಲವಾರು ಸವಾಲುಗಳಿವೆ. ಇನ್ನೂ ಟೆಂಡರ್ ಕರೆಯಲು ಸಾಧ್ಯವಾಗಿಲ್ಲ. ಏಕೆಂದರೆ ಭೂಮಿಯ ಸ್ವಾಧೀನ, ಹಣಕಾಸು, ತಾಂತ್ರಿಕ ಅಂಶಗಳಿವೆ. ನೂತನ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಅನ್ನು ಕಾರ್ಯಗತಗೊಳಿಸಲಾಗಿದೆ. ಈ ಹಿಂದೆ ಮೆಟ್ರೋ ಮಾರ್ಗವಿರುವ ಕಡೆ ಡಬಲ್ ಡೆಕ್ಕರ್ ಸಾಧ್ಯವಾಗಿಲ್ಲ ಎಂದು ಡಿಕೆಶಿ ಹೇಳಿದರು.
ಬೆಂಗಳೂರಿನಲ್ಲಿ ಸುಮಾರು 1,700 ಕಿಮೀ ವಿಸ್ತೀರ್ಣಕ್ಕೆ ವೈಟ್ ಟಾಪಿಂಗ್ ಹಾಕಲಾಗುತ್ತಿದೆ. ಮುಂದಿನ 30 ವರ್ಷ ಇದು ಬಾಳಿಕೆ ಬರುತ್ತದೆ. ರಾಜಕಾಲುವೆ ಪಕ್ಕದಲ್ಲಿ ಹೊಸ ರಸ್ತೆಗಳ ನಿರ್ಮಾಣ. ಮೇಲ್ಸೇತುವೆ ಸೇರಿದಂತೆ ಅನೇಕ ನೂತನ ಯೋಜನೆಗಳು ಸರ್ಕಾರದ ಮುಂದಿವೆ” ಎಂದು ಡಿಸಿಎಂ ಹೇಳಿದರು.,
ಬಾಬಾ ಸಾಹೇಬರ ಸಂವಿಧಾನ ನಮ್ಮೆಲ್ಲರ ಬದುಕನ್ನು ರೂಪಿಸಿದೆ. ಅದೇ ರೀತಿ ಈ ನಮ್ಮರಸ್ತೆ ಎನ್ನುವ ಕೈಪಿಡಿ ಬೆಂಗಳೂರಿನ ಭವಿಷ್ಯ ಹೇಗಿರಬೇಕು ಎಂದು ದಾರಿ ತೋರಿಸಲಿದೆ. ನಾನು ಬೆಂಗಳೂರು ಅಭಿವೃದ್ದಿ ಸಚಿವನಾಗಿ ಅಧಿಕಾರವಹಿಸಿಕೊಳ್ಳುವ ಮೊದಲು ಹಾಗೂ ನಂತರವೂ ಅನೇಕ ಸ್ಥಳಗಳಿಗೆ ಭೇಟಿ ನೀಡಿದಾಗ ಅಲ್ಲಿನ ರಸ್ತೆ, ಮೆಟ್ರೋ, ಸುರಂಗ ರಸ್ತೆಗಳ ಕುರಿತು ಕುತೂಹಲಕ್ಕೆ ತಿಳಿದುಕೊಳ್ಳುತ್ತಿದ್ದೆ” ಎಂದು ಡಿ.ಕೆ.ಶಿವಕುಮಾರ್ ಹೇಳಿದರು.