ಬೆಂಗಳೂರು: ಕಿಯೋನಿಕ್ಸ್ ಅವ್ಯವಹಾರದ ಬಗ್ಗೆ ನಾವು ತನಿಖೆ ಮಾಡಿಸುತ್ತೇವೆ. ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖೆ ಮಾಡಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.ಪ್ರತಿಯೊಂದು ಕಾನೂನು ಪ್ರಕಾರವೇ ಮಾಡಲು ಹೊರಟಿದ್ದೇವೆ.ಎಜಿ ರಿಪೋರ್ಟ್ ಪ್ರಕಾರ 500 ಕೋಟಿ ಅವ್ಯವಹಾರ ನಡೆದಿದೆ. ಪೇಮೆಂಟ್ ಮಾಡಿ ಅಂತಾ ಬಿಜೆಪಿ ಹೇಳೋದು ಇದಕ್ಕೇನಾ? ಪರಿಶೀಲನೆ ಮಾಡದೆ ನಾವು ಬಿಲ್ ಕೊಡಬೇಕಾ? ನಮ್ಮದು ಆಳುವ ಸರ್ಕಾರ ಅಲ್ಲ, ಆಲಿಸುವ ಸರ್ಕಾರ. ತನಿಖೆಯಲ್ಲಿ ಅಕ್ರಮ ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಪಿಎಸ್ ಐ ನೇಮಕಾತಿ ಪ್ರಕರಣ ವಿಚಾರ ಬಗ್ಗೆಯೂ ಮಾತನಾಡಿದ ಅವರು, ಪಿಎಸ್ ಐ ಪ್ರಕರಣದಲ್ಲಿ ಏನು ಮಾಡಿದ್ರು ಅಕ್ರಮವೇ ಆಗಿಲ್ಲ ಅಂದ್ರು ಸದನದಲ್ಲೇ ತಪ್ಪು ಉತ್ತರ ಕೊಟ್ರಲ್ಲ ಒಬ್ಬ ಆರೋಪಿಯನ್ನ ಒಬ್ಬರು ಬಿಡಿಸಿದ್ರಲ್ಲ ಯಾರು ಬಿಡಿಸಿದ್ದು ಯಾರು ಹೇಳಿ ಪರೋಕ್ಷವಾಗಿ ಅಶ್ವಥ್ ನಾರಾಯಣ್ ವಿರುದ್ಧ ವಾಗ್ದಾಳಿ
ಆರ್ ಡಿ ಪಾಟೀಲ್ ಎಸ್ಕೇಪ್ ವಿಚಾರ ಬಗ್ಗೆ ಮಾತನಾಡಿ ಅಧಿಕಾರಿಗಳ ತಪ್ಪಿದ್ರೂ ಕ್ರಮ ಜರುಗಿಸ್ತೇವೆ ಪೊಲೀಸರು ಮಫ್ತಿಯಲ್ಲಿ ಹೋಗಿದ್ದರು ಪಾಟೀಲ್ ಬಂಧನಕ್ಕೆ ಹೋಗಿದ್ದರುಅವರು ಎಸ್ಕೇಪ್ ಆಗಿದ್ದರು ನಾನು ಯಾರನ್ನೂ ಡಿಫೆಂಡ್ ಮಾಡಲ್ಲ ಒದ್ದು ಒಳಗೆ ಆಗ್ತೇವೆ ಇನ್ನೊಂದು ಆರು ತಿಂಗಳು ವೇಯ್ಟ್ ಮಾಡಿ ಯಾರು ಇದ್ದಾರೆ ಎಲ್ಲರ ಮೇಲೆ ಕ್ರಮ ಜರುಗಿಸ್ತೇವೆ ನಾವು ಮೈಮೇಲೆ ಎಣ್ಣೆ ಹಾಕಿ ತಪ್ಪಿಸಿಕೊಳ್ತಿಲ್ಲ ಯಾವುದಕ್ಕೂ ನಾವು ಹೆದರಲ್ಲ ಎಲ್ಲವನ್ನೂ ನಾವು ಹೊರಗೆಳೆಯುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.