ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಟ್ಯಾಕ್ಸ್ ಎಂಬ ಕಮೀಷನ್ ಪದ್ಧತಿ ಇದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಆರ್ ಅಶೋಕ್ ಅದನ್ನು ದಿಲ್ಲಿಗೆ ಸಾಗಿಸಲು ಸುರಂಗ ರಸ್ತೆ ನಿರ್ಮಾಣ ಮಾಡಲಿ, ಇಲ್ಲದಿದ್ದರೆ ಮೋದಿ ಹಿಡಿಯುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಆರ್ ಅಶೋಕ, ”ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತಂದು ‘ಬ್ಯಾಡ್ ಬೆಂಗಳೂರು’ ಮಾಡಿದ್ದಾರೆ.
NBCC Recruitment: ಪರೀಕ್ಷೆಯಿಲ್ಲದೆ NBCC ಕಾರ್ಪೊರೇಷನ್’ನಲ್ಲಿದೆ ಉದ್ಯೋಗಾವಕಾಶ..! ಇಂದೇ ಅರ್ಜಿ ಸಲ್ಲಿಸಿ
ಡೆವಲಪರ್ಗಳು ಚದರ ಅಡಿಗೆ 100 ರೂ. ‘ಕಾಂಗ್ರೆಸ್ ಟ್ಯಾಕ್ಸ್’ ಎಂಬ ಕಮಿಷನ್ ಕೊಡಬೇಕಿದೆ. ಈ ಕಮಿಷನ್ ಸಾಗಿಸಲು ಸುರಂಗ ನಿರ್ಮಾಣ ಯೋಜನೆ ಮಾಡಿದ್ದಾರೆ. ಏಕೆಂದರೆ ವಿಮಾನ, ರೈಲಿನಲ್ಲಿ ಹೋದರೆ ಪ್ರಧಾನಿ ಮೋದಿ ಹಿಡಿಯುತ್ತಾರೆ. ಹಾಗಾಗಿ ಸುರಂಗ ಮಾರ್ಗ ಮಾಡಿ ದಿಲ್ಲಿಗೆ ಸಾಗಿಸಲಿ,” ಎಂದು ಆರ್.ಅಶೋಕ್ ವ್ಯಂಗ್ಯವಾಡಿದರು. ”ಸಿಎಂ ಅವರು ರಾಜ್ಯದ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಅವರು ಕಾಂಗ್ರೆಸ್ ಸರಕಾರದ ಅವಧಿ ಮುಗಿಯಿತೆಂಬ ಕಾರಣಕ್ಕೆ ಧನ್ಯವಾದ ಹೇಳಿದ್ದಾರೋ ಅಥವಾ ಕಾನೂನು ಸುವ್ಯವಸ್ಥೆ ಹಾಳು ಮಾಡಿರುವ ಕೊಲೆಗಾರರಿಗೆ ಧನ್ಯವಾದ ತಿಳಿಸಿದ್ದಾರೋ ಗೊತ್ತಿಲ್ಲ.
ಒಂದು ವರ್ಷದಲ್ಲಿ ಮಗು ಕೂಡ ಅಂಬೆಗಾಲಿಡುತ್ತದೆ. ಆದರೆ ಸರಕಾರ ಇನ್ನೂ ಟೇಕಾಫ್ ಆಗಿಲ್ಲ. ನೇಹಾ, ಅಂಜಲಿ ಕೊಲೆಯಾಗಿದ್ದು, ಮುಂದೆ ಯಾರ ಕೊಲೆ ಎಂಬ ಆತಂಕವಿದೆ. ಹೆಣ್ಣು ಮಕ್ಕಳು ಕಾಲೇಜಿಗೆ ಹೋದರೆ ವಾಪಸ್ಸಾಗುವ ಗ್ಯಾರಂಟಿ ಇಲ್ಲ. ಅಂಜಲಿಯ ಕೊಲೆಯಲ್ಲಿ ಪೊಲೀಸರ ಲೋಪವಿದೆ ಎಂದು ಗೃಹ ಸಚಿವರೇ ಒಪ್ಪಿಕೊಂಡಿದ್ದು, ಸರಕಾರ ಏಕೆ ಇರಬೇಕು,” ಎಂದು ತರಾಟೆಗೆ ತೆಗೆದುಕೊಂಡರು.