RCBಗೆ ಧೋನಿ ಕ್ಯಾಪ್ಟನ್ ಆಗಿದ್ರೆ 3 ಟ್ರೋಫಿ ಗೆಲ್ತಿತ್ತು ಎಂದು ಲೆಜೆಂಡ್ ಕ್ರಿಕೆಟಿ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.
ಐಪಿಎಲ್ ಆರಂಭವಾಗಿ ಬರೋಬ್ಬರಿ 17 ಸೀಸನ್ಗಳು ಕಳೆದಿವೆ. ಈ 17 ಸೀಸನ್ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಬೈ ಇಂಡಿಯನ್ಸ್ ತಂಡಗಳು ಈಗಾಗಲೇ ತಲಾ 5 ಬಾರಿ ಚಾಂಪಿಯನ್ ಆಗುವ ಮೂಲಕ ಗಮನಸೆಳೆದಿವೆ ಆದ್ರೆ ಇದುವರೆಗು ಒಮ್ಮೆ ಕೂಡ ಟ್ರೋಫಿ ಎತ್ತಿ ಹಿಡಿಯುವಲ್ಲಿ ಅಭಿಮಾನಿಗಳ ನೆಚ್ಚಿನ ತಂಡ ಹಾಗೂ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯವರ ತಂಡ ಆರ್ಸಿಬಿ ವಿಫಲವಾಗಿದೆ.
ಫೇಸ್ಬುಕ್ ಸುಂದರಿ ಹಿಂದೆ ಬಿದ್ದ ಪುರೋಹಿತನಿಗೆ ಪಂಗನಾಮ: ಲಕ್ಷ ಲಕ್ಷ ಕಳೆದುಕೊಂಡ ಅರ್ಚಕ!
ಒಂದು ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಏನಾದ್ರೂ ನಾಯಕನಾಗಿದ್ದರೆ ಇಷ್ಟರೊಳಗೆ ಈ ತಂಡ ಮೂರು ಕಪ್ಗಳನ್ನು ಗೆದ್ದಿರುತ್ತಿತ್ತು ಎಂದು ಪಾಕಿಸ್ತಾನ ಲೆಜೆಂಡ್ ಬೌಲರ್ ವಾಸಿಂ ಅಕ್ರಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೆಬ್ಸೈಟ್ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ವಾಸಿಂ ಅಕ್ರಮ್ ಅವರು, ಬೆಂಗಳೂರು ಯಾವಾಗಲು ಉತ್ತಮ ತಂಡವನ್ನೇ ಕಟ್ಟುತ್ತಾ ಬಂದಿದೆ. ಆದ್ರೆ ಅದು ಕಪ್ ಗೆಲ್ಲವಲ್ಲಿ ವಿಫಲವಾಗಿದೆ. ಮಾತ್ರವಲ್ಲ ದಿಗ್ಗಜ ಬ್ಯಾಟ್ಸ್ಮನ್ ವಿರಟ್ ಕೊಹ್ಲಿ ನಾಯಕತ್ವದಲ್ಲಿಯೂ ಈ ತಂಡ ಕಪ್ ಗೆಲ್ಲುವಲ್ಲಿ ಎಡವಿದೆ.
ನನ್ನ ಪ್ರಕಾರ, ಮಹೇಂದ್ರ ಸಿಂಗ್ ಧೋನಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾರಥ್ಯವಹಿಸಿದ್ದರೆ ಖಂಡಿತವಾಗಿಯೂ ಕನಿಷ್ಠ ಮೂರು ಕಪ್ಗಗಳನ್ನಾದರೂ ಗೆಲ್ಲುತ್ತಿದ್ದರು. ಏಕೆಂದರೆ ಧೋನಿ ಅತ್ಯುತ್ತಮ ನಾಯಕ. ಅವರಿಗೆ ತಂಡವನ್ನು ಯಾವ ಪರಿಸ್ಥಿತಿಯಲ್ಲಿ ಹೇಗೆ ಮುನ್ನಡೆಸಬೇಕೆಂದು ಚೆನ್ನಾಗಿ ತಿಳಿದಿದೆ ಎಂದು ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.