ಬೆಸ್ತರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರಕ್ಕೆ ನಾನು ನಿಮ್ಮ ಜೊತೆಗಿದ್ದು, ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು. ಅವರು ಗಂಗಾ ಪರಮೇಶ್ವರಿ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತಾಡಿದರು. ಯಾವ ಅಂಶಗಳನ್ನು ಸೇರಿಸಿ ಕಳುಹಿಸಬೇಕು ಎನ್ನುವುದನ್ನು ಮನದಟ್ಟು ಮಾಡಿಕೊಂಡು ಕುಲಶಾಸ್ತ್ರೀಯ ಅಧ್ಯಯನದ ವರದಿಯಲ್ಲಿ ಕಳುಹಿಸಕೊಡಬೇಕು ಎಂದರು.
ಮಾದಿಗರ ಒಳಮೀಸಲಾತಿ ಕೊಡಬೇಕು ಎಂಬ ಹೋರಾಟಕ್ಕೆ 35 ವರ್ಷಗಳು, ನಿಮ್ಮ ಹೋರಾಟ 26 ವರ್ಷಗಳಾಗಿವೆ. ನಿಮ್ಮ ಕಡತ ದೆಹಲಿಗೆ ಹೋದಾಗ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದರು. ಆಗ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಷಯದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ನಡೆಯುವ ವಾದ ವಿವಾದಗಳನ್ನು ಗಮನಿಸುತ್ತಿದ್ದೆ,
ಸುಲಿದ ಬೆಳ್ಳುಳ್ಳಿಯನ್ನು ಫ್ರಿಡ್ಜ್ ನಲ್ಲಿ ಇಡುತ್ತಿದ್ದೀರಾ: ಈಗಲೇ ನಿಲ್ಲಿಸಿ ಅಪಾಯ ಕಟ್ಟಿಟ್ಟಬುತ್ತಿ!
ನನಗೆ ಬದ್ದತೆ ಇತ್ತು.ನನಗೆ ಈ ಸಮಾಜಕ್ಕೆ ಹೇಗಾದರೂ ನ್ಯಾಯ ಕೊಡಿಸಬೇಕು ಎಂದು ನನ್ನ ಮನಸಿನಲ್ಲಿದೆ. ರಾಯಚೂರು ಗುಲ್ಬರ್ಗಾ ದಿಂದ ಬಂದು ಜನರು ಮೀಸಲಾತಿಗಾಗಿ ಭಿಕ್ಷೆ ಬೇಡುತ್ತಾರೆ. ಆರ್ಟಿಕಲ್ 64 ರಲ್ಲಿ ವಿಶೇಷ ಸೌಲತ್ತನ್ನು ಕೊಡಬೇಕು ಎಂದಿದೆ. ಅದರಂತೆ ಸೇರ್ಪಡೆಯನ್ನು ನಾವು ಪಡೆಯಲು ಮುಂದಾಗಬೇಕು ಎಂದರು.