ನವದೆಹಲಿ: 2002ರ ಗೋಧ್ರಾ ಗಲಭೆ ನಂತರ ವಿರೋಧಿಗಳು ಮುಸ್ಲಿಮರಲ್ಲಿ ನನ್ನ ವ್ಯಕ್ತಿತ್ವಕ್ಕೆ ಕಳಂಕ ತಂದಿದ್ದಾರೆ ಎಂದು ಪ್ರಧಾನಿ ಮೋದಿ ಅಸಮಾಧಾನ ಹೊರಹಾಕಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, 2002ರಲ್ಲಿ ಗೋಧ್ರಾ ಹತ್ಯಾಕಾಂಡದ ಬಳಿಕ, ವಿರೋಧಿಗಳು ಮುಸ್ಲಿಮರಲ್ಲಿ ನನ್ನ ವ್ಯಕ್ತಿತ್ವಕ್ಕೆ ಕಳಂಕ ತಂದಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಮುಸ್ಲಿಮರು ನಮಗೆ ಎಷ್ಟು ಬೆಂಬಲ ಕೊಡುತ್ತಾರೆ ಎಂಬುದನ್ನು ಲೆಕ್ಕಿಸದೇ ಅವರ ಪರ ಕೆಲ ಮಾಡುತ್ತಿದ್ದೇನೆ. ನಮ್ಮ ಮನೆಯ ಸುತ್ತ ಎಲ್ಲಾ ಮುಸ್ಲಿಂ ಕುಟುಂಬಗಳೇ ಇವೆ. ನಮ್ಮ ಮನೆಯಲ್ಲಿ ಈದ್ ಜೊತೆಗೆ ಬೇರೆ ಬೇರೆ ಹಬ್ಬಗಳ ಆಚರಿಸುತ್ತಿದ್ದೆವು. ಈದ್ ಆಚರಿಸುವಾಗ ನಮ್ಮ ಮನೆಯಲ್ಲಿ ಅಡುಗೆಯೇ ಮಾಡುತ್ತಿರಲಿಲ್ಲ. ಸುತ್ತಮುತ್ತಲಿನ ಮುಸ್ಲಿಂ ಕುಟುಂಬಗಳಿಂದಲೇ ಊಟ ಬರುತ್ತಿತ್ತು. ಆ ಪ್ರಪಂಚದಲ್ಲೂ ನಾನು ಬೆಳೆದಿದ್ದೇನೆ.
BMTC Recruitment: ದ್ವಿತೀಯ PUC ಪಾಸಾದವರಿಗೆ BMTCಯಲ್ಲಿ ಬಂಪರ್ ಉದ್ಯೋಗ..! ಈಗಲೇ ಅರ್ಜಿ ಸಲ್ಲಿಸಿ
ಇಂದಿಗೂ ಮೊಹರಂ ಸಂದರ್ಭದಲ್ಲಿ ಕೆಲ ಮುಸ್ಲಿಂ ಸ್ನೇಹಿತರು ಮನೆಗೆ ಊಟ ತಂದುಕೊಡುತ್ತಾರೆ. ಆದ್ರೆ 2002ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡದ ಬಳಿಕ ಮುಸ್ಲಿಮರಲ್ಲಿ ನನ್ನ ವ್ಯಕ್ತಿತ್ವಕ್ಕೆ ಕಳಂಕ ತರಲಾಗಿದೆ ಎಂದು ಬೇಸರ ಹೊರಹಾಕಿದ್ದಾರೆ. ಮುಂದುವರಿದು ಮಾತನಾಡಿದ ಅವರು, ನಾನು ಯಾವತ್ತಿಗೂ ಹಿಂದೂ-ಮುಸ್ಲಿಮರು ಅಂತ ಪ್ರತ್ಯೇಕಿಸುವುದಿಲ್ಲ. ನಾನು ಹಿಂದೂ-ಮುಸ್ಲಿಮರನ್ನು ಪ್ರತ್ಯೇಕಿಸುವ ದಿನ ಸಾರ್ವಜನಿಕ ಜೀವನದಲ್ಲಿ ಇರಲು ಅರ್ಹನಾಗುವುದಿಲ್ಲ. ಎಂದಿಗೂ ನಾನು ಹಿಂದೂ-ಮುಸ್ಲಿಂ ಅಂತ ಪ್ರತ್ಯೇಕಿಸಲ್ಲ, ಇದು ನನ್ನ ಪ್ರತಿಜ್ಞೆ ಎಂದು ಮೋದಿ ನುಡಿದಿದ್ದಾರೆ.