ಬೆಂಗಳೂರು : ನಾನು ಆರು ತಿಂಗಳಲ್ಲಿ ಹಿಂದಿ ಕಲಿಯುತ್ತೇನೆ, ಸಂಸತ್ತಿನಲ್ಲಿ ಹಿಂದಿ ಮಾತನಾಡಿ ಬರ್ತೀನಿ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಸವಾಲ್ ಹಾಕಿದರು.
ಸುಮಲತಾ ಅಂಬರೀಶ್ʼಗೆ ಬೇರೆ ಅವಕಾಶ ಇದೆ, ಸಮಾಧಾನದಿಂದ ಇರಲಿ: ಯಡಿಯೂರಪ್ಪ!
ಕೋಟಾ ಶ್ರೀನಿವಾಸ್ ಪೂಜಾರಿಗೆ ಹಿಂದಿ ಬರಲ್ಲ ಎಂಬ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿಕೆಗೆ ತಿರುಗೇಟು ನೀಡಿದರು. ನನಗೆ ವಿವಾದ ಮಾಡೋಕೆ ಬರಲ್ಲ. ನನ್ನ ಬಗ್ಗೆ ಪ್ರೀತಿ ಇರೋರು ಹೇಳಿದ್ದಾರೆ. ಅವರು ಆತಂಕದಿಂದ ಹೇಳಿದ್ದಾರೆ ಎಂದು ಕುಟುಕಿದರು.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೇನೆ. ಕುಮಾರಸ್ವಾಮಿ ಅವರ ಆರೋಗ್ಯ ಚೇತರಿಕೆ ಆಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಮಾಡಿರುವುದು ಅವರ ಗಮನಕ್ಕೆ ಇದೆ. ಉಡುಪಿ-ಚಿಕ್ಕಮಗಳೂರು ಬಗ್ಗೆ ಸಹಕಾರ ಕೋರಿದೆ ಎಂದರು.