ದಿಸ್ಪುರ: ಇಂದಿರಾ ಅವರ ವಿರುದ್ಧ ಘೋಷಣೆ ಕೂಗಿದ್ದಕ್ಕೆ ನನ್ನನ್ನು ಬಂಧಿಸಿದ್ದರು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಪೊಲೀಸ್ ಅಕಾಡೆಮಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿತೇಶ್ವರ ಸೈಕಿಯಾ ಅಸ್ಸಾಂ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನನ್ನನ್ನು ಬಂಧಿಸಿ ಜೈಲಿಗಟ್ಟಿದ್ದರು. 7 ದಿನ ಜೈಲೂಟ ಮಾಡುವಂತಾಯಿತು ಎಂದು ಹೇಳಿದ್ದಾರೆ.
ಹೈಡ್ರೋಪೋನಿಕ್ ತೋಟಗಾರಿಕೆ ಎಂದರೇನು? ಮಣ್ಣು ಇಲ್ಲದೆ ಸಸ್ಯಗಳನ್ನು ಹೇಗೆ ಬೆಳೆಸಬಹುದು? ಇಲ್ಲಿದೆ ಮಾಹಿತಿ
ಅಸ್ಸಾಂನಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ನನ್ನನ್ನು ಥಳಿಸಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ವಿರುದ್ಧ ‘ಅಸ್ಸಾಂ ಕಿ ಗಾಳಿಯಾ ಸುನಿ ಹೈ, ಇಂದಿರಾ ಗಾಂಧಿ ಖೂನಿ ಹೈ’ ಎಂದು ಘೋಷಣೆಗಳನ್ನು ಕೂಗುತ್ತಿದ್ದೆವು. ಇಂದಿರಾ ಅವರ ವಿರುದ್ಧ ಘೋಷಣೆ ಕೂಗಿದ್ದಕ್ಕೆ ನನ್ನನ್ನು ಬಂಧಿಸಿದ್ದರೆಂದು ತಿಳಿಸಿದ್ದಾರೆ.
ನಾನು ಕೂಡ ಅಸ್ಸಾಂನಲ್ಲಿ ಏಳು ದಿನಗಳ ಕಾಲ ಜೈಲೂಟ ತಿಂದಿದ್ದೇನೆ. ಆಗ ದೇಶಾದ್ಯಂತ ಅಸ್ಸಾಂ ಉಳಿಸಲು ಹೋರಾಟ ನಡೆದಿತ್ತು. ಇಂದು ಅಸ್ಸಾಂ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದಿದ್ದಾರೆ.