ಬೆಂಗಳೂರು: ನನಗೆ ಪಕ್ಷದಿಂದ ವಿಪ್ ಕೊಟ್ಟಿದ್ದರು ಹಾಗೆ ಪಕ್ಷ ಹೇಳಿದ ಅಭ್ಯರ್ಥಿಗೆ ನಾನು ಮತ ಹಾಕಿದ್ದೇನೆ ಎಂದು ತಮ್ಮ ಮತದಾನದ ಬಗ್ಗೆ ಇದ್ದ ಗೊಂದಲಕ್ಕೆ ಜೆಡಿಎಸ್ ಶಾಸಕ ಶರಣುಗೌಡ ಕಂದಕೂರ ತೆರೆ ಎಳೆದರು.
Rajyasabha Election: ಕಾಂಗ್ರೆಸ್ ಪರ ಎಸ್.ಟಿ.ಸೋಮಶೇಖರ್ ಮತ: ಬಿಜೆಪಿಯಿಂದಲೇ ಉಚ್ಛಾಟಿಸುವ ಸಾಧ್ಯತೆ
ವಿಧಾನಸೌಧದಲ್ಲಿ ಇಂದು ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮತದಾನ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷ ನಮಗೆ ವಿಪ್ ಜಾರಿ ಮಾಡಿದೆ. ಪಕ್ಷ ಸೂಚಿಸಿದ ಅಭ್ಯರ್ಥಿಗೆ ಮತ ಹಾಕಿದ್ದೇನೆ ಹಾಗೆ ಹೆಚ್.ಡಿ ಕುಮಾರಸ್ವಾಮಿಯ ಜೊತೆಗಿನ ಮುನಿಸು ಮರೆತು ಪಕ್ಷ ಸೂಚಿಸಿದ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ಹೇಳಿದ್ದಾರೆ.
ಪಕ್ಷದ ಚಟುವಟಿಕೆಯಿಂದ ದೂರ ಉಳಿದ್ದರೂ ಅಧಿವೇಶನಕ್ಕೂ ಸಹ ಗೈರಾಗಿದ್ದರು. ಪಕ್ಷದ ಮುಖಂಡರು ಕಂದಕೂರ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಅಸಮಧಾನ ಇರೋದು ನಿಜ ನನ್ನ ಮನವೊಲಿಕೆ ಮಾಡಲು ನನ್ನ ಸಹೋದರ ಬಂದಿದ್ದರು ಎಂದರು.